ನಾಳೆ ರಾಯಚೂರು ನಗರಕ್ಕೆ ಚಿತ್ರನಟಿ ಪೂಜಾ ರಮೇಶ್.
ನಾಳೆ ರಾಯಚೂರು ನಗರಕ್ಕೆ ಚಿತ್ರನಟಿ ಪೂಜಾ ರಮೇಶ್.
ರಾಯಚೂರು ಅಕ್ಟೋಬರ್ 1 ಗಾಂಧಿ ಜಯಂತಿ ಅಂಗವಾಗಿ ನಾಳೆ ರಾಯಚೂರು ನಗರಕ್ಕೆ ಬೆಳಗ್ಗೆ ಚಿತ್ರನಟಿ ಸಮಾಜ ಸೇವಕಿ. ರಾಯಚೂರು ನಗರಸಭೆ ವಿಧಾನಸಭಾ ಅಭ್ಯರ್ಥಿಯಾಗಿರುವ ಪೂಜ ರಮೇಶ್ ಆಗಮಿಸಲಿದ್ದಾರೆ. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿರುವ ಗಾಂಧೀಜಿ ಪುತ್ತಳಿಗೆ ಮಾಲಾರ್ಪಣೆ ಮತ್ತು ಗಾಂಧಿ ವೃತದಲ್ಲಿರುವ ಮಹಾತ್ಮ ಗಾಂಧಿ ಪುತ್ತಳಿಗೆ ಮಾಲಾರ್ಪಣೆ ಹಾಗೂ ಕನ್ನಡ ಭವನದಲ್ಲಿ ಗಾಂಧಿ ಜಯಂತಿ ಆಚರಣೆ. ವಾರ್ಡ್ ನಂಬರ್ ಮೂರರಲ್ಲಿ ಮಹಿಳೆಯರನ್ನು ಭೇಟಿ ಮಾಡಿ ಅವರು ಆಶೀರ್ವಾದ ಪಡೆಯಲಿದ್ದಾರೆ.
ನಗರದಲ್ಲಿರುವ ಪ್ರಮುಖ ದೇವಸ್ಥಾನಗಳಿಗೆ ಸಂಜೆ ಭೇಟಿ ಮಾಡಲಿದ್ದು ವಿಜಯದಶಮಿ ಅಂಗವಾಗಿ ನವರಾತ್ರಿ ಉತ್ಸವ ಅಂಗವಾಗಿ ದೇವರ ಆಶೀರ್ವಾದ ಪಡೆಯಲಿರುವ ಡಾ. ಪೂಜಾ ರಮೇಶ್. ಸಂಪಾದಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಸಹ ಚಿತ್ರನಟಿ ಪೂಜ ರಮೇಶ್ ಭಾಗವಹಿಸಲಿದ್ದಾರೆ ರಾಯಚೂರು ಗಡಿಭಾಗದ ಗ್ರಾಮವಾದ ಸಗಂಕುಂಟ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಸರ್ಕಾರಿ ಶಾಲಾ ಮಕ್ಕಳ ಜೊತೆ ಆಚರಿಸುವರು. ಎಂದು ಅವರ ಸಲಹೆಗಾರರಾದ ಪತ್ರಕರ್ತ ಮಾರುತಿ ಬಡಿಗೇರ್ ತಿಳಿಸಿದ್ದಾರೆ.
Recent comments