Skip to main content

ರಾಜಾವೆಂಕಟಪ್ಪ ನಾಯಕ ಶಾಸಕರಿಗಾಗಿ ಚರ್ಚ್ನಲ್ಲಿ ಪ್ರಾರ್ಥನೆ.

ರಾಜಾವೆಂಕಟಪ್ಪ ನಾಯಕ ಶಾಸಕರಿಗಾಗಿ ಚರ್ಚ್ನಲ್ಲಿ ಪ್ರಾರ್ಥನೆ.

Raichur

ಸಿರವಾರ:ಮಾನ್ವಿ ವಿಧಾನಸಭಾ ಕ್ಷೆತ್ರದ ಜನಪ್ರಿಯ ಶಾಸಕಾರದ ಶ್ರೀ ರಾಜಾ ವೆಂಕಟಪ್ಪ ನಾಯಕ ಇವರು ಕಳೆದ ಎರಡು ದಿನಗಳಿಂದೆ ಮಹಾಮಾರಿ ಕೊರೋನಾ ಕೋವಿಡ್ -19 ಪರೀಕ್ಷೆಗೆ ಒಳಪಟ್ಟ ಕಾರಣ,ಅವರ ವರದಿ ಕೋವಿಡ್ -19 ಪಾಸಿಟಿವ್ ಎಂದು ದೃಢಪಟ್ಟಿದ್ದು ಕ್ಷೇತ್ರದ ಜನರು ಅವರ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಇನ್ನೂ ಸಿರವಾರದ ಜೆಡಿಎಸ್ ತಾಲೂಕು ಪದಾಧಿಕಾರಿಗಳು ಸೇರಿ,ಮೆಥೊಡಿಸ್ಟ್ ಚರ್ಚ್ ಸಭಾಪಾಲಕಾ ರದ ರೇ.ಸ್ಯಾಮ್ಸೋನ್ ಡ್ಯಾನಿಯಲ್ ಇವರ ಸಮ್ಮುಕದಲ್ಲಿ ಶಾಸಕರ ಗುಣಮುಖಕ್ಕಾಗಿ ಪ್ರಾರ್ಥನೆ ನೆರವೇರಿಸಲಾಯಿತು. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕಾರ್ಯದಲ್ಲಿ ತೊಡಗಿಕೊಂಡಿರುವ ಶಾಸಕರು ಆದಷ್ಟು ಬೇಗಾ ಗುಣಮುಖರಾಗಿ ಮತ್ತೆ ಜನರ ಸೇವೆಗೆ ಸಿದ್ಧರಾಗಲಿ ಎಂದು ದೇವರ ಹೆಸರಿನಲ್ಲಿ ಪ್ರಾರ್ಥಿಸಿದರು.

ಇದೇ ಸಂದರ್ಭದಲ್ಲಿ ಸಿರವಾರದ ಜೆಡಿಎಸ್ ತಾಲೂಕ ಘಟಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ತಾಲೂಕಿನ ಜೆಡಿಎಸ್ ಯುವ ಮುಖಂಡರಾದ ದಾನಿಯೇಲ್ ಇವರು ಮಾತನಾಡಿ ಶಾಸಕರು ಶೀಘ್ರ ಗುಣಮುಖರಾಗಿ ಜನಸೇವೆಯಲ್ಲಿ ತೊಡಗಿಸಿ ಕೊಳ್ಳಲಿ ಎಂದರು ಜೊತೆಗೆ ಚರ್ಚ್ನ ಸಭಾ ಪಾಲಕಾರಿಗೆ ಕೃತಜ್ಞತೆಗಳು ತಿಳಿಸಿದರು,ಅಲ್ಲದೇ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಜೆಡಿಎಸ್ನ ತಾಲೂಕ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಇವರಿಗೆ ಕೃತಜ್ಞತೆ ತಿಳಿಸಿದರು .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.