ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅಸ್ವಸ್ಥ.
ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅಸ್ವಸ್ಥ.
ಕನ್ನಡ ವಿತ್ರರಂಗದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರನ್ನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಇವರು 35 ವರ್ಷಗಳಿಂದ ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಉಸಿರಾಟದ ತೊಂದರೆಯು ಹೆಚ್ಚಾಗಿತ್ತು. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟಿಗೆ ಇಂದು ಕೂಡ ಚಿಕಿತ್ಸೆ ಮುಂದುವರೆದಿದೆ.
68 ವರ್ಷ ವಯಸ್ಸಾಗಿರುವ ಜಯಂತಿ ಅವರಿಗೆ ವಯೋ ಸಹಜ ಕಾಯಿಲೆಗಳು ಕಾಣಿಸಿಕೊಂಡಿದ್ದು ವಿಕ್ರಂ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿರುವ ಜಯಂತಿ ಅವರಿಗೆ ಹಿರಿಯ ಶ್ವಾಸಕೋಶಶಾಸ್ತ್ರಜ್ಞ ಡಾ ಸತೀಶ್ ಚಿಕಿತ್ಸೆ ನೀಡುತ್ತಿದ್ದಾರೆ. 24 ಗಂಟೆ observation ನಲ್ಲಿರುವ ಜಯಂತಿ ಅವರ ಆರೋಗ್ಯವನ್ನ ಇಂದು ಬೆಳ್ಳಿಗ್ಗೆ 11 ಗಂಟೆ ಸುಮಾರಿಗೆ ತಪಾಸಣೆ ಬಳಿಕಾ ಆರೋಗ್ಯದ ಬಗ್ಗೆ ಮಾಹಿತಿ ನೀಡಲಿದ್ದಾರೆ ವೈದ್ಯರು. ಮಗ ಕೃಷ್ಣ ಕುಮಾರ್ ಜಯಂತಿ ಅವರ ಬಳಿ ಇದ್ದು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಇನ್ನು ಸಿನಿಮಾರಂಗದಿಂದ ನಿನ್ನೆಯೇ ಸಾಕಷ್ಟು ಕಲಾವಿದರು ಬಂದು ಅಭಿನಯ ಶಾರದೆಯ ಆರೋಗ್ಯ ವಿಚಾರಿಸಿದ್ದಾರೆ. ಸಿನಿಮಾ ಕಲಾವಿದರಾದ ತಾರ, ಬಿ ಸರೋಜದೇವಿ, ಲೀಲಾವತಿ ಹಾಗೂ ವಿನೋದ್ ರಾಜ್, ಹೇಮಾ ಚೌದರಿ, ಹುಚ್ಚ ವೆಂಕಟ್ ಹಾಗೂ ಭಗವಾನ್ ಇನ್ನೂ ಅನೇಕರು ಜಯಂತಿ ಅವರ ಆರೋಗ್ಯ ವಿಚಾರಿಸಿದರು. ಇಂದು ಡಾ ರಾಜ್ ಕುಟುಂಬದವರು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆಗಳಿವೆ.
Recent comments