ಎನ್ ಎಸ್ ಬೋಸ್ ರಾಜು ಅವರ ವತಿಯಿಂದ ಆಹಾರ ಕಿಟ್ ವಿತರಣೆ
ಎನ್ ಎಸ್ ಬೋಸ್ ರಾಜು ಅವರ ವತಿಯಿಂದ ಆಹಾರ ಕಿಟ್ ವಿತರಣೆ .
ರಾಯಚೂರು : ಕೊರೋನಾ ವೈರಸ್ನಿಂದಾಗಿ ಇಡೀ ಭಾರತವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಅಸಂಘಟಿತ ಕೂಲಿ ಕಾರ್ಮಿಕರ ಹೊಟ್ಟೆಯ ಮೇಲೆ ಬರೆ ಎಳೆದಂತೆ ಆಗಿದೆ ಹೀಗಾಗಿ ಕೆಲಸವಿಲ್ಲದೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ ಇಂತಹ ಸಮಯದಲ್ಲಿ ಜೀವನ ಸಾಗಿಸಲು ಸಂಕಷ್ಟದಲ್ಲಿರುವ ಕಡು ಬಡವರ ಕುಟುಂಬಗಳಿಗೆ ಇಂದು ದಿನಾಂಕ 28.04.2020 ರಂದು ಶ್ರೀ. ಎನ್.ಎಸ್.ಬೋಸರಾಜು ಫೌಂಡೇಷನ್ ವತಿಯಿಂದ ರಾಯಚೂರು ತಾಲೂಕಿನ ಸಿದ್ದರಾಂಪುರ, ರಾಜಲಬಂಡಾ ಹಾಗೂ ಬಿಜನಗೇರಾ , ಬೋಳಮಾನದೊಡ್ಡಿ ಗ್ರಾಮದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ.ಎನ್. ಎಸ್. ಬೋಸರಾಜು, ಮಾನ್ಯ ವಿಧಾನಪರಿಷತ್ ಸದಸ್ಯರು, ಶ್ರೀ.ಬಿ.ವಿ. ನಾಯಕ್, ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ, ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀ. ಕೆ ಶಾಂತಪ್ಪ, ಶ್ರೀ ಜಯಂತರಾವ್ ಪತಂಗೆ, ನಗರಸಭೆ ಸದಸ್ಯರಾದ ಶ್ರೀ ಜಯಣ್ಣ, ಶ್ರೀ ಬಸ್ರುದ್ದೀನ್, ನೂರುದ್ದೀನ್, ಕಡಗೋಲ ಆಂಜನೇಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಂಜನೇಯ ಕುರುಬದೊಡ್ಡಿ ಹಾಗೂ ಯುವ ಮುಖಂಡರಾದ ರವಿ ಬೋಸರಾಜು ಮತ್ತು K ಗೋಪಿ, ವಸಂತ್ ಅರೋಲಿ ಹಾಗೂ ಸಿದ್ದರಾಂಪುರ, ರಾಜಲಬಂಡಾ ಹಾಗೂ ಬಿಜನಗೇರಾ , ಬೋಳಮಾನದೊಡ್ಡಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
Recent comments