100 ಜನ ಕಣ್ಣು ದಾನ ಮಾಡುವ ಮೂಲಕ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಚಿತ್ರ ತಂಡ.
100 ಜನ ಕಣ್ಣು ದಾನ ಮಾಡುವ ಮೂಲಕ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಚಿತ್ರ ತಂಡ.
ಶ್ರೀ ಕಲ್ಪವೃಕ್ಷ ಕಂಬೈನ್ಸ್ ಅಡಿಯಲ್ಲಿ ಮುತ್ತುರಾಜ್ ಹೆಚ್ . ಪಿ .ವಸಂತ ಕುಮಾರ್ ಹಾಗೂ ಚಂದ್ರ ಕುಮಾರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರ “ಕೆಲವು ದಿನಗಳ ನಂತರ” . ಚಿತ್ರದ ತಂಡ ಚಾಂಮುಡೇಶ್ವರಿ ಸ್ಟುಡಿಯೋದಲ್ಲಿ ಸಿನಿಮಾದ ಟ್ರೈಲರ್ ಹಾಗೂ ಆಡಿಯೋ ರಿಲೀಸ್ ಸಮಾರಂಭದಲ್ಲಿ ಬಾಗವಹಿಸಿದ್ದ , “ನಾರಾಯಣ ನೇತ್ರಲಯದ ವ್ಯವಸ್ಥಾಪಕರ ಸಮ್ಮುಖದಲ್ಲಿ ಚಿತ್ರ ತಂಡದ 100 ಜನ ತಮ್ಮ ಮರಣನಂತರದ ನೇತ್ರದಾನದ ಪ್ರಮಾಣ ಪತ್ರವನ್ನು ಪಡೆಯುವ ಮೂಲಕ ಟ್ರೈಲರ್ ಮತ್ತು ಆಡಿಯೋ ರಿಲೀಸ್ ಮಾಡಲಾಯಿತು.
ಇನ್ನೂ ಚಿತ್ರ ಕಳೆದ ವರ್ಷ ಮೇ 1ರಂದು ಚಿತ್ರೀಕರಣ ಆರಂಭಿಸಿ ಸರಿಯಾಗಿ ಒಂದು ವರ್ಷಕ್ಕೆ ಆಡಿಯೋ ಬಿಡುಗಡೆ ಮಾಡುತ್ತಿರುವುದು ವಿಶೇಷವಾಗಿತ್ತು. ಸಿನಿಮಾ “ಕೆಲವು ದಿನಗಳ ನಂತರ” ನಿರ್ದೇಶಕ “ಶ್ರೀನಿ” ಹೊಸ ಪ್ರತಿಭೆ ಡೈರಕ್ಟ್ ಮಾಡ್ತಾಯಿದ್ದು ಚಿತ್ರ “ಹರಾರ್ ಮತ್ತು ಸಮಾಜಿಕ” ವಿಷಯಯಾದರಿತ ಚಿತ್ರವಾಗಿದೆ ಎನ್ನುತ್ತಾರೆ. ಪ್ರಸ್ತುತ ಸಮಾಜದಲ್ಲಿ ಯುವಕ ಮತ್ತು ಯುವತಿಯರು ಮಾಡುವ ಸಣ್ಣ ತಪ್ಪಿನಿಂದ ಏನೆಲ್ಲ ಅನಾಹುತ ಅಗುವುದು ಕಥೆಯ ಹಂದರವಾಗಿದೆ. ಚಿತ್ರದಲ್ಲಿ ವಿಶೇಷವಾಗಿ 3ಡಿ ಮಗುವಿನ ರಚನೆ ಮಾಡಿದ್ದು ಅದರ ಅಭಿನಯ ವಿಶೇಷ ವಾಗಿದೆ ಎನ್ನುತ್ತಾರೆ ನಿರ್ದೇಶಕರು.
ನಾಯಕಿ ಯಾಗಿ ಶುಬಾ ಪುಂಜ ,ಮಾಜಟಾಕೀಸ್ ಪವನ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮುತ್ತುರಾಜ್ ಮುಂತಾದವರ ತಾರಗಣವಿದೆ. ಇನ್ನೂ ಕಾರ್ಯಕ್ರಮದಲ್ಲಿ ರಾಘವೆಂದ್ರ ರಾಜ್ ಕುಮಾರ್ ರವರು ಚಿತ್ರ ತಂಡದ ಕಣ್ಣಿನ ದಾನದ ಸಮಾಜೀಕ ಕಳಕಳಿಯನ್ನ ಮೆಚ್ಚಿ ಚಿತ್ರತಂಡಕ್ಕೆ ಹಾರೈಸಿದರು.
Recent comments