ಜೆಡಿಎಸ್ ಪಕ್ಷ ಪ್ರಚಾರಕ್ಕೆ” ಗಬ್ಬರ್ ಸಿಂಗ್ “ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್” ಎಂಟ್ರಿ. ಪಕ್ಷದ ಪ್ರಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಸಾಥ್.
ಜೆಡಿಎಸ್ ಪಕ್ಷ ಪ್ರಚಾರಕ್ಕೆ” ಗಬ್ಬರ್ ಸಿಂಗ್ “ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್” ಎಂಟ್ರಿ.
ಪಕ್ಷದ ಪ್ರಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಸಾಥ್.
ರಾಜ್ಯದಲ್ಲಿ ಎಲ್ಲೆಲ್ಲೋ ಕುಮಾರ ಹವಾ, ವಿಕಾಸ ಪರ್ವದ ಪ್ರಭಾವ. ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಪರ ಪ್ರಚಾರಕ್ಕೆ ನಟ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ ಕೊಡಲಿದ್ದಾರೆ.ಜೆಡಿಎಸ್ ಪಕ್ಷ ಈ ಬಾರಿ ರಾಜ್ಯದ ಮುಂಬರುವ ಚುನಾವಣೆಯಲ್ಲಿ,ಬಹುಮತ ಪಡೆಯಲು ಶತಯಾಗತಾಯ ಬಾರಿ ಪ್ರಯತ್ನ ನಡೆದಿದೆ. ಕಳೆದ ತಿಂಗಳಷ್ಟೆ ಬೆಂಗಳೂರಿನಲ್ಲಿ ವಿಕಾಸ ಪರ್ವದ ಅಬುತ ಪೂರ್ವದ ಕಾರ್ಯಕ್ರಮದ ಯಶಸ್ವಿ ನಂತರ ಮತ್ತೆ,ರಾಜ್ಯದಲ್ಲಿ ಗಬ್ಬರ್ ಸಿಂಗ್ ಎಂಟ್ರಿ ಯಾಗ್ತಾಇದ್ದಾರೆ.
ಜೆಡಿಎಸ್ ಪಕ್ಷದ ಪರ ಕಾರ್ಯಕರ್ತರು ಎಲ್ಲೆಲ್ಲೋ ಜೆಡಿಎಸ್.
ಈ ಸಾರಿ ಜೆಡಿಎಸ್ ಪಕ್ಷವನ್ನ ಅದಿಕಾರಕ್ಕೆ ತರಲು ಬಾರಿ ಬಾರಿ ಪ್ರಚಾರ ನಡೆಸಿದ್ದಾರೆ. ಇನ್ನೂ ರಾಜ್ಯದ ವಿಕಾಸ ಪರ್ವದಲ್ಲಿ ಕುಮಾರ ಸ್ವಾಮಿಯವರು ಜನರಿಂದ ಬಾರಿ ಬೆಂಬಲ ಗಿಟ್ಟಿಸಿ ಕೊಳ್ಳುವಲ್ಲಿ ಸಫಲರಾಗಿದ್ದು .ಮತ್ತೆ ಕಾರ್ಯಕರ್ತ,ಜನರಲ್ಲಿ ಪಕ್ಷದ ಬಗ್ಗೆ ಮನವರಿಕೆ ಮಾಡಿಸಲು ಜೆಡಿಎಸ್ ಈ ಸಾರಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನ ಪ್ರಚಾರಕ್ಕೆ ಕರೆತರುತ್ತಿರುವುದು ಇಗಾಗಲೆ ಪಕ್ಷದಲ್ಲಿ ಬಾರಿ ಕುತೂಹಲ ಮೂಡಿಸಿದೆ. ತೆಲುಗು ಭಾಷಿಕರು ಹೆಚ್ಚಾಗಿರುವ ಮತ್ತು ತೆಲಾಂಗಣ ಹಾಗೂ ಆಂಧ್ರ ಪ್ರದೇಶ ಪ್ರದೇಶಗಳಿಗೆ ಹೊಂದಿಕೊಂಡಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಪವನ್ ಕಲ್ಯಾಣ ಪ್ರಚಾರ ಮಾಡಲಿದ್ದಾರೆ.
ಇನ್ನೂ ಪಕ್ಷದಲ್ಲಿ ಇರುವ ಯುವ ಕಾರ್ಯಕರ್ತರನ್ನ ಸೇಳೆಯಲು ಜಾಗ್ವರ್ ಚಿತ್ರದ ನಾಯಕ ನಿಖಿಲ್ ಕುಮಾರ ಸ್ವಾಮಿ ಕೂಡ ಪವನ್ ಸ್ಟಾರ್ ಗೆ ಸಾಥ್ ನಿಡಲಿದ್ದಾರೆ. ಜಾಗ್ವರ್ ಚಿತ್ರದ ಪ್ರಚಾರದ ವೇಳೆ ಪವನ್ ಕಲ್ಯಣ್ ಅವನ್ನ ಸಂಪರ್ಕಿಸಿದ್ದು,ಇದೀಗ ನಿಖಿಲ್ ಅವರನ್ನು ಕೂಡ ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಮೂರು ನಾಲ್ಕು ಬಾರಿ ಪವನ್ ಕಲ್ಯಾಣ್ ಜೊತೆ ಚರ್ಚೆ ನಡೆಸಿ ಪ್ರಚಾರಕ್ಕೆ ಬರುವಂತೆ ಆಹ್ವಾನ ಮಾಡಿದ್ದರು. ಪವನ್ ಕಲ್ಯಾಣ್ ಇತ್ತಿಚಿಗೆ ಕಳೆದ ನಾಲ್ಕು ವರ್ಷಗಳಿಂದ ಸಿನಿಮಾ ಜೊತೆಗೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು,2014 ಮಾರ್ಚ್ ನಲ್ಲಿ ತಮ್ಮದೇ “ಜನ ಸೇನಾ”ಪಕ್ಷವನ್ನ ಸ್ಥಾಪನೆ ಮಾಡಿದ್ದಾರೆ. 2019ರ ವಿಧಾನಸಭಾ ಚುನಾಚಣೆಯಲ್ಲಿ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದೆ.ಇನ್ನೂ ಸಹೋದರ ಚಿರಂಜೀವಿ “ಜನಸೇನಾ” ಪಕ್ಷಕ್ಕೆ ಸೇರ್ಪಡೆಯಾಗಲ್ಲ. ರಾಜಕೀಯವಾಗಿ ನನ್ನ ಆಗುವುದಿಲ್ಲ.2019ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಶೇ.60ರಷ್ಟು ಕ್ಷೇತ್ರಗಳಲ್ಲಿ ಯುವಕರು ಸ್ಪರ್ಧಿಸಲಿದ್ದು,ನಾನು ಅನಂತಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದರು.
Recent comments