ಜೆಡಿಎಸ್ ದಲಿತ ನಾಯಕ ಆಲ್ಕೋಡ್ ಹನುಮಂತಪ್ಪ ಕಾಂಗ್ರೇಸ್ ಸೇರ್ಪಡೆ:
ಜೆಡಿಎಸ್ ದಲಿತ ನಾಯಕ ಆಲ್ಕೋಡ್ ಹನುಮಂತಪ್ಪ ಕಾಂಗ್ರೇಸ್ ಸೇರ್ಪಡೆ:
ಜೆಡಿಎಸ್ ನ ಮಾಜಿ ಸಚಿವ ಮತ್ತು ಶಾಸಕರು ಆಗಿದ್ದ ಹನುಮಂತಪ್ಪ ಆಲ್ಕೋಡ್ ಜೆಡಿಎಸ್ ನಿಂದ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಪಕ್ಷದ ನಬ್ಬಿಕೆಯ ವ್ಯೇಕ್ತಿ,ದಲಿತ ಮುಂಖಡರು ಅಲ್ಲದೆ, ಕುಮಾರ ಸ್ವಾಮಿಯ ಅಪ್ತರಾಗಿದ್ದ ಇವರು ಜೆಡಿಎಸ್ ತೋರೆಯುತ್ತಿದ್ದಾರೆ.ಕುಮಾರಸ್ವಾಮಿಯವರ ಇಪ್ಪತ್ತು ತಿಂಗಳ ಸರ್ಕಾರದ ಅವಧಿಯಲ್ಲಿ,ಯುವಜನ ಸೇವ ಕ್ರೀಡ ಸಚಿವರಾಗಿ ಸೇವೆಸಲ್ಲಿಸಿದ್ದರು.
ಪಕ್ಷ ಬಿಡಲು ಕಾರಣವಾದರು ಏನು.?
ಜೆಡಿಎಸ್ ಪಕ್ಷದ ನಂಬಿಕೆಯ ಅಭ್ಯರ್ಥಿಯಾಗಿದ್ದ ಇವರು ದೇವದುರ್ಗ ಕ್ಷೇತ್ರದ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿ ಮಂತ್ರಿಯಾಗಿ ಸೇವೆಸಲ್ಲಿಸಿದ್ದಾರೆ.ಅಲ್ಲದೇ ಈ ಕ್ಷೇತ್ರದ ಜನರ ಅಚ್ಚು ಮೇಚ್ಚಿನ ನಾಯಕರಾಗಿದ್ದರು.ಆದರೆ ದೇವದುರ್ಗ ಮೀಸಲು ಎಸ್ ಟಿ ಕ್ಷೇತ್ರವಾದ ಕಾರಣ, ಕ್ಷೇತ್ರವನ್ನು ಬಿಟ್ಟು ಕೊಡಬೇಕಾಯಿತು,ಆದರೆ ಇಪ್ಪತ್ತು ತಿಂಗಳ ಅಧಿಕಾರದ ಅವಧಿಯ ನಂತರ ಧಾರವಾಡದಲ್ಲಿ ವಾಸವಾಗಿದ್ದ ಇವರು.ರಾಯಚೂರಿನ ಲಿಂಗಸುಗೂರು ಎಸ್ಸಿ ಮೀಸಲು ಕ್ಷೇತ್ರದಿಂದ ಚುನಾವಣೆಗೆ ತಯಾರಿನಡೆಸಿದ್ದರು. ಅಲ್ಲದೆ ಈ ಕ್ಷೇತ್ರದಿಂದ ಜೆಡಿಎಸ್ ಟೀಕೆಟ್ ಆಕಾಂಕ್ಷೀಯಾಗಿದ್ದರು. ಆದರೆ ಕ್ಷೇತ್ರದಲ್ಲಿ ಪ್ರಭಾವಿ ಅಭ್ಯರ್ಥಿಯಾಗಿದ್ದ . ಶಾಸಕ ಮಾನಪ್ಪವಜ್ಜಲ್ ಕೂಡ ಪಕ್ಷ ತೊರೆದಿದ್ದರು.ಅದೆ ಕಾರಣಕ್ಕೆ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಜೆಡಿಎಸ್ ಟೀಕೆಟ್ ಗಾಗಿ ಧಾರವಾಡ ದಿಂದ ಬಂದು,ಲಿಂಗಸುಗೂರು ಕ್ಷೇತ್ರದಲ್ಲಿ ಮನೆಮಾಡಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಗಳನ್ನ ಮಾಡಿ ಕ್ಷೇತ್ರದ ಲಿಂಗಸುಗೂರನಲ್ಲಿ ಟಿಕಾಣಿ ಹಾಕಿದ್ದರು. ಆದರೆ ಇದ್ದಕ್ಕಿದಂತೆ ಜೆಡಿಎಸ್ ಪಕ್ಷದಿಂದ ಟೀಕೆಟ್ ತಪ್ಪಿದಕಾರಣ ಸಿದ್ದು ಬಂಡಿಯವರಿಂದ ಐದು ಕೋಟಿ ಡಿಲ್ ಮಾಡಿಕೊಂಡಿದ್ದಾರೆ ಎಂದು ಅನುಮಾನದ ಮಾತುಗಳು ಹರಿದಾಡುತ್ತೀವೆ.ಇದೇ ಕಾರಣಕ್ಕೆ ಕಾಂಗ್ರೇಸ್ ಕಡೆ ಮೂಖ ಮಾಡಿರುವುದು ಕ್ಷೇತ್ರದ ಜನರಲ್ಲಿ ಬಾರಿ ಅನುಮಾನದ ಮಾತುಗಳು ಹರಿದಾಡುತ್ತೀವೆ.
Recent comments