ರಾಯಚೂರಿನ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ ರಿಮ್ಸ್ ಆಸ್ಪತ್ರೆ ಮತ್ತು ನಿರಾವರಿ ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್
ರಾಯಚೂರಿನ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ ರಿಮ್ಸ್ ಆಸ್ಪತ್ರೆ ಮತ್ತು ನಿರಾವರಿ ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್.
ಸಿರವಾರ:ರಾಯಚೂರಿನ ಜಿಲ್ಲಾಉಸ್ತುವಾರಿ ಸಚಿವರು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಜಿಲ್ಲೆ ಸಂಪೂರ್ಣವಾಗಿ ಅಭಿರುದ್ದಿಯಿಂದ ಹಿಂದೂಳಿದಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮತ್ತು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.ತುಂಗಭದ್ರಾ ಮತ್ತು ನಾರಾಯಣಪುರ ಈ ಭಾಗದ ರೈತರ ಜೀವನಾಡಿಗಳಾಗಿದ್ದು,ನೀರಾವರಿಗೆ ಸಂಭದಿಸಿದ ಕಾರ್ಯಕ್ರಮಗಳ ಬಗ್ಗೆ ನೀರಾವರಿ ಅಧಿಕಾರಿಗಳಿಗೆ ಮಾಹಿತಿ ಕೇಳಿದರೆ ಇದಕ್ಕೆ ಸಂಭಸಿದ ಯಾವುದೇ ಸರಿಯಾದ ಮಾಹಿತಿ ಇಲ್ಲದೇ ಇರುವುದು ಅವ್ಯವಹಾರದ ಅನುಮಾನಗಳು ಹುಟ್ಟುಹಾಕುತ್ತಿದ್ದೆ ಜೊತಗೆ ,ಈ ಭಾಗದ ರೈತರಿಗೆ ಭಾರಿ ಅನ್ಯಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಇನ್ನೂ ರಾಯಚೂರಿನ ಜಿಲ್ಲಾ ಆಸ್ಪತ್ರೆ ರಿಮ್ಸ್ನ ಅವ್ಯವಸ್ಥೆ ಬಗ್ಗೆ ಮಾತನಾಡುತ್ತ,ಈ ಭಾಗದ ಅತ್ಯುನತ ಆಸ್ಪತ್ರೆ ಓಪಕ್ ಆಸ್ಪತ್ರೆಯ ಬಗ್ಗೆ ಮಾತನಾಡಿ,ಇಲ್ಲಿರುವ ಅವ್ಯವಸ್ಥೆ ಬಗ್ಗೆ ಆತಂಕ ವೇಕ್ತಪಡಿಸಿದರು. ಇನ್ನಾದರೂ ಈ ಭಾಗದ ಜನರು ಎಚ್ಚೆತ್ತು ಕೊಂಡು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡದೆ ಇದ್ದರೆ ಮುಂದೆ ಭಾರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.ಕೋವಿಡ್ ಸಾಂಕ್ರಾಮಿಕ ರೋಗದ ಹೆಸರಿನಲ್ಲಿ ಯಾವುದೇ ಅಭಿರುದ್ದಿ ಕೆಲಸಗಳಾಗಿಲ್ಲ,ಇನ್ನಾದರೂ ಈ ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿರುದ್ದಿಯ ಕಾರ್ಯಕ್ರಮಗಳ ಬಗ್ಗೆ ಆಲೋಚಿಸಿ ಈ ಭಾಗದ ರೈತಾಪಿ ಜನರಿಗೆ ಅನುಕೂಲವಾಗುವಂತಹ ಕೆಲಸದ ಬಗ್ಗೆ ಗಮನ ಹರಿಸಬೇಕು ಎಂದು ಎಚ್ಚರಿಕೆ ನೀಡಿದರು.
Recent comments