ಇದೆ 15 ನಂಜುಂಡಿ ನೇತೃತ್ವದಲ್ಲಿ ಬೆಂಗಳೂರಲ್ಲಿ ಬೃಹತ್ ವಿಶ್ವಕರ್ಮ ಸಮಾವೇಶ. ಮಾರುತಿ ಬಡಿಗೇರ್
ಇದೆ 15 ನಂಜುಂಡಿ ನೇತೃತ್ವದಲ್ಲಿ ಬೆಂಗಳೂರಲ್ಲಿ ಬೃಹತ್ ವಿಶ್ವಕರ್ಮ ಸಮಾವೇಶ. ಮಾರುತಿ ಬಡಿಗೇರ್.
ವಿಶ್ವಕರ್ಮ ಸಮಾಜವನ್ನು ಎಸ್ ಟಿ ಮಿಸಲಾತಿಗೆ ಸೇರಿಸಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮದ ಸಾಲ ಮನ್ನಾ ಮಾಡಬೇಕು. ಇನ್ನಿತರ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಇದೆ 15 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಳಗಿದೆಂದು ರಾಜ್ಯ ಮಾಧ್ಯಮ ವಕ್ತಾರರದ ಮಾರುತಿ ಬಡಿಗೇರ್ ಹೇಳಿದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರಾದ ಹಾಗೂ ವಿಧಾನಪರಿಷತ್ ಸದಸ್ಯರಾದ ಕೆಪಿನಂಜುಂಡಿ ಅವರ ಸಾರಥ್ಯದಲ್ಲಿ ರಾಜ್ಯಮಟ್ಟದ ವಿಶ್ವಕರ್ಮ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದ ಮೂಲೆ ಮೂಲೆಯಿಂದ ಸಾಕಷ್ಟು ಜನ ವಿಶ್ವಕರ್ಮರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು. ನಮ್ಮ ಜಿಲ್ಲೆಯಿಂದಲೂ ಏಳು ತಾಲೂಕಿನಿಂದ ಸಾಕಷ್ಟು ಜನ ವಿಶ್ವಕರ್ಮರು ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಸಮಾವೇಶವನ್ನು ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾದ ಕಟೀಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ವಿಶ್ವಕರ್ಮ ಸಮುದಾಯದ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಕಷ್ಟು ಜನ ವಿಶ್ವಕರ್ಮರು ಇದೇ 15 ರಂದು ಮದ್ಯಹ್ನ 3 ಗಂಟೆಗೆ ಭಾಗವಹಿಸುವವರು... ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಿಂದ ಸುಮಾರು ಐದು ಸಾವಿರ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕೆಪಿನಂಜುಂಡಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಬೃಹತ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಸಮಾಜದವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಬ್ರಹ್ಮ ಗಣೇಶ. ಸೋಮಣ್ಣ ಪತ್ತಾರ್ ಸಿಂಧನೂರು ಹಾಗೂ ಪ್ರಧಾನ ಕಾರ್ಯದರ್ಶಿ ಕೆ ರಾಮು ಗಾಣದಾಳ. ಕೆ ಲಕ್ಷ್ಮಿಪತಿ ಯರಗೆರ.ಜಿಲ್ಲಾ ಯುವ ಅಧ್ಯಕ್ಷ ಗುರು ಮಂಡಿಪೇಟೆ.. ನಾಮ ನಿರ್ದೇಶಕ ಎಸ್ ರವೀಂದ್ರಕುಮಾರ್. ತಾಲೂಕ ಅಧ್ಯಕ್ಷರಾದ ಮೌನೇಶ್ ಗೊನ್ವಾರ್ ರಘು ಊಟಕುರ್. ಇನ್ನಿತರರಿದ್ದರು.
Recent comments