ಅಸ್ಲಾಂ ಪಾಶ ರವರಿಗೆ, ಕಾಂಗ್ರೇಸ್ ಪಕ್ಷದಿಂದ ಚುನಾವಣೆಗೆ ಟಿಕೇಟ್ ಫಿಕ್ಸ್.?
ಅಸ್ಲಾಂ ಪಾಶ ರವರಿಗೆ, ಕಾಂಗ್ರೇಸ್ ಪಕ್ಷದಿಂದ ಚುನಾವಣೆಗೆ ಟಿಕೇಟ್ ಫಿಕ್ಸ್ .?
ರಾಯಚೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿಯಿದ್ದು.ಇನ್ನೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಯಾವ ಅಭ್ಯರ್ಥಿಗಳನ್ನು ಇನ್ನೂ ಕಣಕ್ಕೆ ಇಳಿಸಿಲ್ಲ.ಆದರೆ ರಾಯಚೂರು ವಿಧಾನ ಸಭಾ ಕ್ಷೇತ್ರಕ್ಕೆ ಈ ಸಾರಿ ಟಿಕೇಟ್ ಗಾಗಿ ಭಾರಿ ಪೈ ಪೋಟಿ ನಡೆದಿದೆ. ಕಳೆದ ಚುನಾವಣೆಯಲ್ಲಿ ರಾಯಚೂರು ಗ್ರಾಮ ಮತ್ತು ನಗರ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದೊಂದು ಕ್ಷೇತ್ರವನ್ನು ತಮ್ಮದಾಗಿಸಿ ಕೊಂಡಿದ್ದವು. ಆದರೆ,ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಹೊಸ ಅಭ್ಯರ್ಥಿಯಾದ ,ಕೆ.ಅಸ್ಲಾಂ ಪಾಶ ರಾಯಚೂರು ಕ್ಷೇತ್ರದಲ್ಲಿ ತಮ್ಮ ಹೊಸ ಅಲೆಯನ್ನ ಸೃಷ್ಟಿಮಾಡಿದ್ದಾರೆ.
ಈ ಗಾಗಲೆ ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರರಾದ ಕೆ.ಅಸ್ಲಾಂ ಪಾಶ. ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ.ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿದ್ದು. ಕ್ಷೇತ್ರದ ಮುಂದಿನ ಅಭ್ಯರ್ಥಿ ಇವರೇ ಎಂದು ಜನರು ಹೆಳುತ್ತಿದ್ದಾರೆ. ಇನ್ನೂ ಮೂಲತಃ ರಾಯಚೂರು ಜಿಲ್ಲೆಯ ಸಿರವಾರ ತಾಲುಕಿನವರಾದ ಇವರು,ನೊಡು ನೊಡುತ್ತಿದ್ದಂತೆ,ರಾಜಕೀಯ ಎಂಬ ಕ್ಷೇತ್ರದಲ್ಲಿ ಅತೀವೆಗವಾಗಿ ಬೆಳೆದಂತಹ ವೆಕ್ತಿ.ಸಾಮಾನ್ಯ ಜನರಂತೆ ರಾಜಕೀಯದಲ್ಲಿ ಬಂದು ಜನರ ಸೆವೆ ಮಾಡಿ ,ಪಕ್ಷದ ಸಣ್ಣ ಕಾರ್ಯಕರ್ತನಾಗಿ ದುಡಿದು ಮೊದಲನೆ ಬಾರಿಗೆ ಗ್ರಾಮ ಪಂಚಾಯಿತಿಯ ಸದ್ಯಸ್ಯರಾಗಿ ರಾಜಕೀಯ ಅರಂಭಿಸಿದ ಇವರು ಯಶಸ್ಸುನ್ನು ಹೆಗಲ ಮೇಲೆ ಹೊತ್ತು ಕೊಂಡ ವೆಕ್ತಿ. ಅಲ್ಲಿಂದ ಮುಂದೆ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಗೆದ್ದು, ಸದಸ್ಯರಾದರು,ಮತ್ತೆ ತಮ್ಮ ಅಛಲ ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆದು ಒಂದು ಹೆಜ್ಜೆ ಮುಂದೆ ಇಟ್ಟು,ರಾಯಚೂರು ವಿಧಾನ ಸಭಾಚುನಾವಣೆಗೆ ತಯಾರಿ ನಡೆಸಿದ್ದಾರೆ. ಇಲ್ಲಿಯ ಜನರೆ ಹೆಳುವಂತೆ ಈ ಸಾರಿ ಕೆ.ಅಸ್ಲಾಂ ಪಾಶರವರಿಗೆ ಪಕ್ಷದಿಂದ ಟಿಕೇಟ್ ಫಿಕ್ಸ್,ಎಂದು ಅಭ್ಯರ್ಥಿ ಮತ್ತು ಪಕ್ಷದಪರ ಪ್ರಚಾರ ನಡೆಸಿದ್ದಾರೆ.
ಅಸ್ಲಾಂ ಪಾಶ ಮತ್ತು ರವಿ ಬೋಸ್ ರಾಜ್ ಕುಚುಕು ಸ್ನೇಹಿತರು.
ರಾಜಿಕೀಯದಲ್ಲಿ ದುಶ್ಮನ್ ಗಳೆ ಜಾಸ್ತಿ ಆದರೆ ಕುಚುಕು ಸ್ನೇಹಿತರು ಸಿಗುವುದು ತುಂಬಾ ವಿರಳ. ಇವರ ವಿಷದಲ್ಲಿ ರಾಜಕೀಯಕ್ಕಿಂತ ಸ್ನೇಹಕ್ಕೆ ಬೆಲೆ ಹೆಚ್ಚು.”ಕೆ ಅಸ್ಲಾಂ ಪಾಶ” ಮತ್ತು “ಎನ್.ಎಸ್. ಬೋಸ್ ರಾಜ್” ಪುತ್ರ “ರವಿ ಬೋಸ್ ರಾಜ್” ಜೊತೆ ಜೊತೆಗೆ ರಾಜಕೀಯದಲ್ಲಿ ಸ್ನೇಹಿತರಾಗಿ ಬಂದು ಇಂದು ಕ್ಷೇತ್ರದಲ್ಲಿ ನೆಚ್ಚಿನ ರಾಜಕೀಯ ನಾಯಕರುಗಳಾಗಿ ಬೆಳೆದಿದ್ದಾರೆ.ಸದ್ಯ ಚುನಾವಣೆಯ ಕಾವು ಎಲ್ಲೆಡೆ ಇರುವುದರಿಂದ ಕ್ಷೇತ್ರದಲ್ಲಿ ಇಬ್ಬರು ನಾಯಕರುಗಳು ಟಿಕೇಟ್ ಗಾಗಿ ಬಾರಿ ಪೈಪೋಟಿ ನಡೆಸಿದ್ದಾರೆ. ಇನ್ನೂ ಕ್ಷೇತ್ರದ ಅಭ್ಯರ್ಥಿಗಳು ಯಾರು ಎಂದು ತಿರ್ಮಾನ ಮಾಡುವುದು ಪಕ್ಷದ ಹಿರಿಯ ನಾಯಕರುಗಳಿಗೆ ಬಿಟ್ಟ ವಿಷಯ.
Recent comments