ಯಾರೋ ಮಾಡಿದ ತಪ್ಪಿಗೆ ನಾವು ಬಲಿಪಶುಗಳಾಗಿದ್ದೇವೆ.!!ಕಾರಾಗೃಹ ಸಿಬ್ಬಂದಿಗಳ ಆತಂಕ .
ಯಾರೋ ಮಾಡಿದ ತಪ್ಪಿಗೆ ನಾವು ಬಲಿಪಶುಗಳಾಗಿದ್ದೇವೆ.!!ಕಾರಾಗೃಹ ಸಿಬ್ಬಂದಿಗಳ ಆತಂಕ .
ರಾಮನಗರ:ಪಾದರಾಯನಪುರದ ಗದ್ದಲ ರಾಮನಗರ ಜನತೆಯಲ್ಲಿ ಆತಂಕ ವನ್ನ ಸೃಷ್ಟಿಮಾಡಿದೆ.ಈ ಕೇಲವು ದಿನಗಳಹಿಂದೆ ಪಾದರಾಯನ ಪುರದಲ್ಲಿ ನಡೆದ ಗದ್ದಲದಿಂದ ಪೋಲೀಸರ ವಶದಲ್ಲಿದ್ದ ಕೇಲವು ಕೈದಿಗಳನ್ನ ರಾಮನಗರಕ್ಕೆ ,ಎಚ್.ಡಿ.ಕೆ ಕುಮಾರಸ್ವಾಮಿವರ ವಿರೋಧದ ನಡುವೆಯೂ ಅವರನ್ನ ಇಲ್ಲಿಯ ಕಾರಗೃಹಕ್ಕೆ ವರ್ಗಯಿಸಲಾಗಿತ್ತು. ಆದರೆ ಇಂದು ಮದ್ಯಾಹ್ನದ ಹೊತ್ತಿಗೆ 5 ಜನಕ್ಕೆ ಕೊರೋನಾ ಪಾಸಿಟಿವ್ ಆಗಿದೆ ಎಂದು ಗೊತ್ತಾಗಿನಿಂದ ಇಲ್ಲಿಯಾ ಕಾರಗೃ ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಾಗಿದೆ .
ರಾಮನಗರದ ಜನರ ಹಿತದೃಷ್ಟಿಯಿಂದ ಇಲ್ಲಿಯಾ ಕಾರಾಗೃಹದ ಸಿಬ್ಬಂದಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಊಟದ ವೆವಸ್ಥೆ ಮಾಡಿದ ಜನರ ಕೋರ್ಟೈನ್ ಮಾಡಬೇಕೆಂದು ಹೇಳಿದ್ದರು, ಹಾಗಾಗಿ ,ರಾಮನಗರ ಕಾರಾಗೃಹ ಸಿಬ್ಬಂದಿಗಳು ಮಾಜಿ ಸಿಎಂ HD ಕುಮಾರಸ್ವಾಮಿಯವರಿಗೆ ಮನವಿ ಮಾಡಿ, ಎನೂ ಮಾಡದ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಿದ್ದಾರೆ.ಯಾವುದೇ ಮುಂಜಾಗ್ರತೆ ಇಲ್ಲದೇ ಕೆಲಸ ಮಾಡಿಸಿದ್ದಾರೆ ಎಂದು ಜೈಲು ಸಿಬ್ಬಂದಿ ಆರೋಪಿಸಿದ್ದಾರೆ. ಪಿಪಿಇ ಕಿಟ್ ನೀಡದೆ ಕೇವಲ ಮಾಸ್ಕ್ ಮಾತ್ರ ನೀಡಿ ಕೈದಿಗಳ ವಿಚಾರಿಸಲು ಒತ್ತಾಯ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ .
ನಮ್ಮನ್ನ ಬೇರೆ ಕಡೆ ಕ್ವಾರಟೆಂನ್ ನಲ್ಲಿ ಇಡಬೇಡಿ ನಮ್ಮ ವಸತಿಗೃಹದಲ್ಲೆ ಕ್ವಾರಂಟೆನ್ ಮಾಡಿಸಿ ಎಂದು ಮಾಜಿ ಸಿಎಂ ಹೆಚ್ಡಿಕೆ ಮುಂದೆ ಅಳಲು ತೋಡಿಕೊಂಡರು . ಯಾರೋ ಮಾಡಿದ ತಪ್ಪಿಗೆ ನಾವು ನೋವು ಅನುಭವಿಸುವಂತಾಗಿದೆ ಜೈಲು ಸಿಬ್ಬಂದಿಗಳಿಂದ HD ಕುಮಾರಸ್ವಾಮಿಯವರಿಗೆ ಮನವಿ ಮಾಡಿಕೊಂಡ ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿಯವರಿಂದ ಭರವಸೆ ನೀಡಿದ್ದಾರೆ. ಇನ್ನೂ ಎಚ್ ಡಿ ಕುಮಾರಸ್ವಾಮಿ ಯವರು ನಿಮ್ಮ ಮನೆಗಳಲ್ಲೆ ಇರಿ ಯಾರು ಹೊರ ಬರಬೇಡಿ ಅಂತಾ ಜೈಲು ಸಿಬ್ಬಂದಿಗಳಿಗೆ ಮನವಿ ಮಾಡಿದಕೊಂಡರು.
Recent comments