ರಾಯಚೂರು ಗುಂಜಳ್ಳಿ ಗ್ರಾಮದ ಕೂಲಿಕಾರ್ಮಿಕರು ಮರಳಿ ಸ್ವಗ್ರಾಮಕ್ಕೆ.
ರಾಯಚೂರು ಗುಂಜಳ್ಳಿ ಗ್ರಾಮದ ಕೂಲಿಕಾರ್ಮಿಕರು ಮರಳಿ ಸ್ವಗ್ರಾಮಕ್ಕೆ.
![Raichur](/sites/default/files/inline-images/WhatsApp%20Image%202020-03-27%20at%2022.26.04.jpeg)
ರಾಯಚೂರು ತಾಲೂಕಿನ ಗುಂಜಳ್ಳಿ ಗ್ರಾಮದ ಕೂಲಿಕಾರ ಕಾರ್ಮಿಕರು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಕೇಬಲ್ ವರ್ಕ್ ಹಾಗೂ ಇನ್ನಿತರ ಉಪಜೀವನದ ನಿಮಿತ್ತ ತೆರಳಿದ್ದರು ತೆರಳಿದ ಕೆಲವೇ ದಿನಗಳಲ್ಲಿ ಈ ಭಯಂಕರ ಕರೋನಾ ರೋಗದ ಹಿನ್ನೆಲೆಯಲ್ಲಿ ಯಾವುದೇ ಕೆಲಸಗಳು ಸಿಗದೆ ಗುತ್ತೇದಾರರು ಅವರನ್ನು ಕಡೆಗಣಿಸಿ ಬೀದಿಗೆ ತಳ್ಳಿದರು ಈ ಸಂದರ್ಭದಲ್ಲಿ ವಾಹಿನಿ ಮುಖಾಂತರ ಅರಿತ ಸನ್ಮಾನ ಶ್ರೀ ಎನ್ ಎಸ್ ಬೋಸರಾಜ್ ಸಾಹೇಬ್ರ ಅವರು ರಾಯಚೂರು ತಾಲ್ಲೂಕಿನ ಗುಜಳ್ಳಿ ಗ್ರಾಮಸ್ಥರ ಪರಿಸ್ಥಿತಿ ಹಾಗೂ ಅನಾನುಕೂಲವನ್ನು ಅರಿತು ಸನ್ಮಾನ್ಯ ಶ್ರೀ ಭೋಸರಾಜ್ ಸಾಹೇಬರ್ ಖುದ್ದಾಗಿ, ಬಿ.ಬಿ.ಎಂ.ಪಿ. ಆಯುಕ್ತರ ಹಾಗೂ ಮೇಯರ್ ರವರನ್ನು ಸಂಪರ್ಕಿಸಿ ಅವರಿಗೆ ಊಟ ಉಪಾಹಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ ಮತ್ತು ಸ್ವಂತ ಗ್ರಾಮಕ್ಕೆ ಗುಂಜಳ್ಳಿಗೆ ಬರಲು ರಾಯಚೂರು ಜಿಲ್ಲಾಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ, ಲಿಖಿತ ಅನುಮತಿ ಮೇರೆಗೆ ಅವರುಗಳನ್ನು ಸುರಕ್ಷಿತವಾಗಿ ಅವರವರ ಮನೆಗಳಗೆ ತೆರಳಲು ಇಂದು ಸ್ವತಃ ವಾಹನವನ್ನು ಏರ್ಪಡಿಸಿ ಕಳುಹಿಸಿಕೊಟ್ಟರು..
Recent comments