ಸಂಜೀವಿನಿ ಟ್ರಸ್ಟ್ ಅಂಬುಲೆನ್ಸ್ ಗೆ ಡಿಸೇಲ್ ವ್ಯವಸ್ಥೆ ಮಾಡಿಕೊಟ್ಟ ಶ್ರೀ ಜಿ.ಲೊಕರೆಡ್ಡಿ.
ಸಂಜೀವಿನಿ ಟ್ರಸ್ಟ್ ಅಂಬುಲೆನ್ಸ್ ಗೆ ಡಿಸೇಲ್ ವ್ಯವಸ್ಥೆ ಮಾಡಿಕೊಟ್ಟ ಶ್ರೀ ಜಿ.ಲೊಕರೆಡ್ಡಿ.
ಸಿರವಾರ: ತಾಲುಕಿನ ಜನರಲ್ಲಿ ಈ “ಕೊರೋನಾ” ರೋಗದ ಬಗ್ಗೆ ಜಾಗೃತಿ ಅಭಿಯಾನ ಕೈಗೊಂಡಿರುವ ಸಂಜೀವಿನಿ ಟ್ಟಸ್ಟ್ ಇವರು ಅಂಬುಲೆನ್ಸ್ ಮೂಲಕ ತಾಲುಕಿನ ವಿವಿಧ ಭಾಗಗಳಿಗೆ ತೆರಳಿ ಈ ಸಂಕ್ರಾಮಿಕ ರೋಗದ ಬಗ್ಗೆ ಹರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ, ಈಗಾಗಲೇ ಕವಿತಾಳ,ಕಲ್ಲೂರು ,ಮಾನ್ವಿಗಳ ಪಟ್ಟಣ ಹಳ್ಳಿಗಳಿಗೆ ತೆರಳಿ ಈ ರೊಗದ ಬಗ್ಗೆ ಜಾಗೃತಿ ಅಭಿಯಾನದ ಮೂಲಕ ತಿಳಿಸಿ ಕೊಡುವ ಕಾರ್ಯಕೈಗೊಂಡಿದ್ದಾರೆ, ಇದನ್ನ ಅರಿತ ಜಿ.ಲೊಕರೆಡ್ಡಿಯವರು ಸಂಜೀವಿನಿ ಟ್ರಸ್ಟ್ನ ಅಂಬುಲೆನ್ಸ್ ಒಡಾಟದ ಅಭಿಯಾನಕ್ಕಾಗಿ, ಡಿಸೇಲ್ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
ಸಹಾಯ ಅಸ್ತಚಾಚಿದ ಶ್ರೀಜಿ.ಲೋಕರೆಡ್ಡಿ.
ತಾಲುಕಿನ ಹಿರಿಯ ವಾಣಿಜ್ಯೋದ್ಯಮಿಗಳು,ಸಮಾಜಸೇವಕರು, ಜೆಡಿಎಸ್ ಮುಖಂಡರಾದ ಶ್ರೀ.ಜಿ.ಲೋಕರೆಡ್ಡಿ ಯವರು ಸದಾ ಒಂದಲ್ಲ ಒಂದು ಸಾಮಾಜಿಕ ಕಾರ್ಯ ಚಟುವಟಿಕೆ ಮತ್ತು ಜನರ ಜನರ ಕುಂದುಕೊರತೆ, ಸಮಾಜಕ್ಕೆ ಒಳಿತುಆಗುವಂತಹ ಕಾರ್ಯಗಳನ್ನ ಮಾಡುತ್ತ ಬಂದಿದ್ದಾರೆ,ಅದೇ ರೀತಿ ಈ ಹಿಂದೇ ,ಅಕಸ್ಮಿಕ ಅಪಘತಾ ಒಂದರ ಘಟನೆಯಲ್ಲಿ ವಿದ್ಯಾರ್ಥಿಯೋರ್ವಳು ತನ್ನ ಕೈಯನ್ನು ಕಳೆದು ಕೊಂಡು ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿ ಮಾನವಿಯತೆ ಮೆರೆದಿದ್ದರು. ಈ ಕೊರೋನಾ ಲಾಕ್ಡೌನ್ ಸಮಯದಲ್ಲಿ ಜನರ ಮುಂಜಾಗೃತ ರಕ್ಷಣೆಗಾಗಿ ಮಾಸ್ಕ ಹಂಚುವ ಮೂಲಕ ಜನರಿಗೆ ಸಹಾಯಮಾಡಿದ್ದರು. ಈಗ ಕೇಲವು ದಿನಗಳಿಂದ ಕೊರೋನಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸಂಜೀವಿನಿ ಟ್ರಸ್ಟ್ ಇವರಿಗೆ ಅಂಬುಲೆನ್ಸ್ ಮೂಲಕ ಜಾಗೃತಿ ಮೂಡಿಸಲು ಡಿಸೇಲ್ ವ್ಯೆವಸ್ಥೆ ಮಾಡಿಕೊಟ್ಟಿದ್ದು ಇದರ ಅನುಕೂಲ ಮಾಡಿಕೊಟ್ಟ ಶ್ರೀ ಜಿ . ಲೊಕರೆಡ್ಡಿ ಇವರಿಗೆ ಸಂಜೀವಿನಿ ಟ್ರಸ್ಟ್ ನ ಅಧ್ಯಕ್ಷರಾದ ಜ್ಞಾನಮಿತ್ರ ಇವರು ಅಭಿನಂದನೆ ಸಲ್ಲಿಸಿದ್ದಾರೆ.
Recent comments