ಕಲಿಯುಗದ ಕರ್ಣ ಜಿ ಲೋಕರೆಡ್ಡಿ ಹುಟ್ಟುಹಬ್ಬದ ಪ್ರಯುಕ್ತ ಕಾರ್ಮಿಕರಿಗೆ ಪುಡ್ ಕಿಟ್ ವಿತರಣೆ.
ಕಲಿಯುಗದ ಕರ್ಣ ಜಿ ಲೋಕರೆಡ್ಡಿ ಹುಟ್ಟುಹಬ್ಬದ ಪ್ರಯುಕ್ತ ಕಾರ್ಮಿಕರಿಗೆ ಪುಡ್ ಕಿಟ್ ವಿತರಣೆ.
ಸಿರವಾರ: ಧಾನ, ಧರ್ಮ, ಸಾಮಾಜಿಕ ಕಾರ್ಯ ಚಟುವಟಿಕೆಗಳ ಮೂಲಕ ತಮ್ಮನ್ನು ತಾವು ಸದಾ ಜನಸೇವೆಯಲ್ಲಿ ತೋಡಗಿಸಿಕೊಂಡಿರುವ, ತಾಲುಕಿನ ವಾಣಿಜ್ಯೋದ್ಯಮಿಗಳು,ಸಾಮಾಜಿಕ ಸೇವಕರು ಜೆಡಿಎಸ್ ಪಕ್ಷದ ಹಿರಿಯ ರಾಜಕೀಯ ಮುಖಂಡರುಗಳಾದ ಜಿ ಲೋಕರೆಡ್ಡಿಯವರು ಇಂದು ತಮ್ಮ ಹುಟ್ಟುಹಬ್ಬವನ್ನು ಸರಳಾವಾಗಿ ಕಾರ್ಮಿಕರ ನಡುವೆ ಆಚರಣೆ ಮಾಡಿಕೊಂಡರು. ಈಗಾಗಲೇ ತಾಲುಕಿನಾದ್ಯಂತ ಈ ಕೊರೋನಾ ಮುಂಜಾಗೃತ ಕ್ರಮಗಳಿಗಾಗಿ ಜನರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಿದ್ದರು.ಅಲ್ಲದೇ ಕಷ್ಟದಲ್ಲಿರುವ ಬಡಕುಟುಂಬದವರಿಗೆ ಸಹಾಯಮಾಡುವ ಮೂಲಕ ಸಿರವಾರದ ಕಲಿಯುಗ ಕರ್ಣರಾಗಿದ್ದಾರೆ.
ಇನ್ನೂ ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ಉಚಿತವಾಗಿ ಬಡ ಕಾರ್ಮಿಕರಿಗೆ ಪುಡ್ ಕಿಟ್ ವಿತರಣೆ ಕಾರ್ಯಕ್ರಮ ಉದ್ದೇಶೆಸಿ ಮಾತನಾಡಿದ ಜಿ ಲೊಕರೆಡ್ಡಿಯವರು ಇಂದು ವಿಶೇಷವಾಗಿ ಮೇ 1 ತಾರೀಖು ಕಾರ್ಮಿಕರ ದಿನಾಚರಣೆ ಅದರಲ್ಲು ನಾನು ಕೂಡ ಇವತ್ತಿನ ದಿನದಲ್ಲಿ ಹುಟ್ಟಿರುವುದು ನನಗೆ ಸಂತೋಷದ ವಿಷಯವಾಗಿದೆ ಹಾಗಾಗಿ ಇವತ್ತಿನ ದಿನದಲ್ಲಿ ಕಷ್ಟದಲ್ಲಿರುವ ಬಡ ಕುಟುಂಬದ ಕಾರ್ಮಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಉಚಿತವಾಗಿ ಪುಡ್ ಕಿಟ್ ವಿತರಣೆ ಮಾಡುತ್ತಿದ್ದೆನೆ ಎಂದರು.
ಇನ್ನೂ ತಾಲೂಕಿನಲ್ಲಿ ಯಾವುದೇ ತೊಂದರೆ ಯಾದರೂ ಅಪ್ಪತ್ತಿನ ಸಮಯದಲ್ಲಿಎಲ್ಲರೂ ಒಟ್ಟಿಗೆ ನಿಂತ್ತು ಸಹಾಯಕರಾಗೋಣ ಎಂದು ಹೇಳಿದರು. ಅಲ್ಲದೇ ಈ ಸಮಾಜಿಕ ಕಾರ್ಯಕ್ಕೆ ಅವರ ಅಭಿಮಾನಿಗಳು ಜೆಡಿಎಸ್ ಮುಖಂಡರು ತಾಲುಕಿನ ಗಣ್ಯರು ಹುಟ್ಟುಹಬ್ಬದ ಶುಭಾಷಯ ತಿಳಿಸಿದರು.
Recent comments