ಜೆಡಿಎಸ್ ಕಾರ್ಯಕರ್ತರಿಂದ ರಾಜಾ ವೆಂಕಟಪ್ಪನಾಯಕರಿಗೆ ಸಚಿವ ಸ್ಥಾನಕ್ಕಾಗಿ ಒತ್ತಾಯ.
ಜೆಡಿಎಸ್ ಕಾರ್ಯಕರ್ತರಿಂದ ರಾಜಾ ವೆಂಕಟಪ್ಪನಾಯಕರಿಗೆ ಸಚಿವ ಸ್ಥಾನಕ್ಕಾಗಿ ಒತ್ತಾಯ.
ಮಾನ್ವಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಇವರ ಕೈ ಇಡಿದಿರಲಿಲ್ಲ , ಆದರೆ ಈ ಚುನಾವಣೆಯೆ ನನ್ನ ಕೊನೆಯ ಚುನಾವಣೆಯೆಂದು ಕಣಕ್ಕೆ ಇಳಿದಿದ್ದ ರಾಜಾ ವೆಂಕಟಪ್ಪ ನಾಯಕರಿಗೆ ಕ್ಷೇತ್ರದ ಜನ ಕೊನೆಗೂ ಜೈ ಎಂದಿದ್ದಾರೆ.
ಅದೃಷ್ಟ ಅಂದ್ರೇನೆ ಹೀಗೆ ನೋಡಿ ಕ್ಷೇತ್ರದ ಜನರ ಸೇವೆ ಮಾಡಲು ಶಾಸಕರಾಗಿ ಆಯ್ಕೆಯಾದರೆ ಸಾಕು ನನಗೆ ನಿಮ್ಮ ಸೇವೆ ಮಾಡಲು ಅವಕಾಶಮಾಡಿ ಕೊಡಿ ಸಾಕು ಎನ್ನುತ್ತಿದ್ದ ನಾಯಕರಿಗೆ. ಅದೃಷ್ಟ ಕೈ ಹಿಡಿದು ಕುಮಾರಣ್ಣ ಕೃಪೆ ತೊರಿದರೆ ಸಚಿವ ಸ್ಥಾನ ಪಕ್ಕ ಆಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ ಪುಷ್ಟಿ ಎನ್ನುವಂತೆ ಮಾನ್ವಿ ವಿಧಾನಸಭಾ ಎಸ್ಟಿ ಮೀಸಲು ಕ್ಷೇತ್ರ ವಾಗಿದ್ದು ಜೆಡಿಎಸ್ ಪಕ್ಷದಿಂದ ಅಯ್ಕೆಯಾದ ಎಸ್ಟಿ ಅಭ್ಯರ್ಥಿಗಳು ಯಾರು ಇಲ್ಲದ ಕಾರಣ ಇವರಿಗೆ ಸಚಿವ ಸ್ಥಾನವನ್ನು ನಿಡಬೇಕು ಎಂದು ಸಿರವಾರ ತಾಲುಕು ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ರಾಜ್ಯ ಜೆಡಿಎಸ್ ಅಧ್ಯಕ್ಷರು ಕುಮಾರಸ್ವಾಮಿಯವರಿಗೆಒತ್ತಾಯ ಮಾಡಿದ್ದಾರೆ.
Recent comments