Skip to main content
" ಸೀತಮ್ಮನ ಮಗ" ನಿಗಾಗಿ ಹಾಡಿದರು "ಸರಿಗಮಪ" ದ ಮೆಹಬೂಬ್ ಸಾಬ್.

" ಸೀತಮ್ಮನ ಮಗ" ನಿಗಾಗಿ ಹಾಡಿದರು "ಸರಿಗಮಪ" ದ ಮೆಹಬೂಬ್ ಸಾಬ್.

" ಸೀತಮ್ಮನ ಮಗ" ನಿಗಾಗಿ ಹಾಡಿದರು "ಸರಿಗಮಪ" ದ ಮೆಹಬೂಬ್ ಸಾಬ್.

Kannada

"ಸರಿಗಮಪ" ರಿಯಾಲಿಟಿ ಶೋ ಮೂಲಕ ಮನೆಮಾತಾಗಿರುವ ಮೆಹಬೂಬ್ ಸಾಬ್ ಅವರು "ಸೀತಮಮ್ಮನ ಮಗ" ಚಿತ್ರಕ್ಕಾಗಿ ಯತಿರಾಜ್ ಬರೆದಿರುವ " ಸೀತೆಯೆಂಬ ಹೆಸರಲ್ಲೇನೋ ದೋಷವುಂಟು..ಯುಗಗಳೇ ಕಳೆದರೂನು ಲೋಪವುಂಟು" ಎಂಬ ಅಮ್ಮನ ಕುರಿತಾದ ಭಾವುಕ ಗೀತೆಯನ್ನು ಹಾಡಿದ್ದಾರೆ. ವಿನುಮನಸು ಸಂಗೀತ ನೀಡಿರುವ ಈ ಹಾಡಿನ ಧ್ವನಿಮುದ್ರಣ ರೇಣು ಸ್ಟುಡಿಯೋದಲ್ಲಿ ನಡೆಯಿತು.

ಈ ಹಿಂದೆ ನಾನು ಹಾಡಿದ್ದ ಬಿಟ್ಟೋಗ್ ಬೇಡ ನನ್ನ.." ಗೀತೆಯಂತೆ ಈ ಹಾಡು ಕೂಡ ಜನಪ್ರಿಯತೆ ಪಡೆಯಲಿದೆ. ಇದುವರೆಗೂ ಅಮ್ಮನ ಕುರಿತಾಗಿ ಬಂದಿರುವ ಎಲ್ಲಾ ಹಾಡುಗಳಂತೆ ಈ ಹಾಡು ಕೂಡ ಜನಪ್ರಿಯವಾಲಿ' ಎಂದು ಮೆಹಬೂಬ್ ಸಾಬ್ ಚಿತ್ರತಂಡಕ್ಕೆ ಶುಭಕೋರಿದರು.

Kannada

ಸೋನು ಫಿಲಂಸ್ ಲಾಂಛನದಲ್ಲಿ ಕೆ‌.ಮಂಜುನಾಥ್ ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಚಿತ್ರವನ್ನು ಯತಿರಾಜ್ ನಿರ್ದೇಶಿಸುತ್ತಿದ್ದಾರೆ. ಯತಿರಾಜ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ‌ ಮತ್ತು ಪ್ರಮುಖಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಚೈತ್ರಾ ಶ್ರೀನಿವಾಸ್, ಚರಣ್ ಕಾಸಲ, ಸೋನು ಸಾಗರ, ಬುಲೆಟ್ ರಾಜು, ಬಸವರಾಜ್, ಜೀವನ್ ರಾಜ್, ಮಂಜುನಾಥ್ ನಾಯಕ್, ಸಿಂಚನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಜೀವನ್ ರಾಜ್ ಛಾಯಾಗ್ರಹಣ ಹಾಗೂ ಶಶಿಕುಮಾರ್ ಇಜ್ಜಲಘಟ್ಟ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.