ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.
ಬೆಂಗಳೂರು ಕೇಂದ್ರ ಪ್ರಯೋಗಿಸುವ ನೂರರ ಸಂಭ್ರಮದಲ್ಲಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು ರಾಷ್ಟ್ರೀಯ ನಾಟಕ ಶಾಲೆ (ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಒಂದು ಸ್ವಾಯತ್ತ ಸಂಸ್ಥೆ) ಬೆಂಗಳೂರು ಕೇಂದ್ರವು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದೊಂದಿಗೆ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ರಂಗ ಪ್ರಯೋಗವನ್ನು ಪ್ರಸ್ತುತಪಡಿಸುತ್ತಿದೆ. 9 ಗಂಟೆಗಳ ಅವಧಿಯ ಈ ನಾಟಕವು ಆಹೋರಾತ್ರಿ ನಡೆಯಲಿದೆ ಎನ್.ಎಸ್.ಡಿ ಬೆಂಗಳೂರು ಕೇಂದ್ರದ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ 75 ನಟರು ಸುಮಾರು 9 ಗಂಟೆಗಳ ಕಾಲ ರಾತ್ರಿಯಿಡೀ ನಡೆಯುವ ನಾಟಕದಲ್ಲಿ ಪಾತ್ರವಹಿಸಲಿದ್ದಾರೆ. ಕುವೆಂಪು ಅವರ ಸರ್ವೋತ್ಕೃಷ್ಟ ರಚನೆ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿ ಹಾಸುಹೊಕ್ಕಿರುವ ಸೌಂದರ್ಯ, ಪ್ರಣಯ, ಪರಿಸರ ಮತ್ತು ಬದುಕಿನ ದುರಂತವನ್ನು 4 ಬೃಹತ್ ಬಯಲು ರಂಗಮಂಚಗಳಲ್ಲಿ ಅಭಿನೀತಗೊಳ್ಳಲಿವೆ. ಇದೇ ಫೆಬ್ರವರಿ 14 ರ ಪ್ರದರ್ಶನ ನೂರರ ಸಂಭ್ರಮದ ಪ್ರಯೋಗವಾಗಲಿದೆ.
Recent comments