ಜೆ ಕೆ ಈಗ ಐರಾವನ್.
ಜೆ ಕೆ ಈಗ ಐರಾವನ್.
ಕಾಲಭೈರವನ ಸನ್ನಿಧಿಯಲ್ಲಿ ನೂತನ ಚಿತ್ರ ಆರಂಭ.
ನಮ್ಮ ರಾಜ್ಯದಲ್ಲಿ ಕೊರೋನ ಆರ್ಭಟ ಕಡಿಮೆಯಾಗುತ್ತಿರುವ ಬೆನ್ನಲ್ಲೇ, ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿದೆ. ನೂತನ ಚಿತ್ರಗಳ ಆರಂಭವೂ ಹೆಚ್ಚಾಗುತ್ತಿದೆ. ನಟ
*ಜೆ ಕೆ (ಜಯರಾಂ ಕಾರ್ತಿಕ್)* ನಾಯಕರಾಗಿ ನಟಿಸುತ್ತಿರುವ *ಐರಾವನ್* ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಗವಿಪುರಂನ ಕಾಲಭೈರವೇಶ್ವರ ಸನ್ನಿಧಿಯಲ್ಲಿ ನೆರವೇರಿತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ದೃಶ್ಯಕ್ಕೆ *ನಿರಂತರ ಗಣೇಶ್* ಅವರು ಆರಂಭ ಫಲಕ ತೋರಿದರು. ತುಮಕೂರಿನ *ಶ್ರೀ ಶ್ರೀ ಸಾಗರ ಮಹಾಸ್ವಾಮಿಗಳು* ಕ್ಯಾಮೆರಾ ಚಾಲನೆ ಮಾಡಿದರು.
*ನಿರಂತರ ಗಣೇಶ್* ಅವರು ತಮ್ಮ ನಿರಂತರ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. *ರಾಮ್ಸ್ ರಂಗಾ* ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ *ರಾಮ್ಸ್ ರಂಗಾ* ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಈ ಚಿತ್ರಕ್ಕೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.
*ಎಸ್.ಪ್ರದೀಪ್ ವರ್ಮ* ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ *ದೇವೇಂದ್ರ* ಛಾಯಾಗ್ರಹಣ, *ಕೆ.ಎಂ.ಪ್ರಕಾಶ್* ಸಂಕಲನ, *ಅರ್ಜುನ್* ಸಾಹಸ ನಿರ್ದೇಶನ ಹಾಗೂ *ವಲ್ಲಭ* ಅವರ ನಿರ್ಮಾಣ ನಿರ್ವಹಣೆಯಿದೆ. *ಜೆ ಕೆ, ವಿವೇಕ್, ಅದ್ವಿತಿ ಶೆಟ್ಟಿ, ಅವಿನಾಶ್, ಕೃಷ್ಣ ಹೆಬ್ಬಾರ್* , ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Recent comments