ಈ ವಾರ ಶಿವಾಜಿ ಸುರತ್ಕಲ್ ( ಕೇಸ್ ಆಫ್ ರಣಗಿರಿ ರಹಸ್ಯ) ಮರು ಬಿಡುಗಡೆ.
ಈ ವಾರ ಶಿವಾಜಿ ಸುರತ್ಕಲ್ ( ಕೇಸ್ ಆಫ್ ರಣಗಿರಿ ರಹಸ್ಯ) ಮರು ಬಿಡುಗಡೆ.
ಲಾಕ್ ಡೌನ್ ಆರಂಭಕ್ಕೂ ಕೆಲವು ದಿನಗಳ ಮುಂಚೆ ತೆರೆ ಕಂಡು, ಎಲ್ಲರ ಮನಸೂರೆಗೊಂಡ ಶಿವಾಜಿ ಸುರತ್ಕಲ್ ಚಿತ್ರ ಅಕ್ಟೋಬರ್ ೧೬ ರಂದು ಮರು ಬಿಡುಗಡೆಯಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಾರಾಯಣ್ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖ ಕೆ.ಎನ್, ಅನೂಪ್ ಗೌಡ ಈ ಚಿತ್ರ ನಿರ್ಮಿಸಿದ್ದಾರೆ. ಆಕಾಶ್ ಶ್ರೀವತ್ಸ ನಿರ್ದೇಶನವಿರುವ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಹಾಗೂ ಗುರುಪ್ರಸಾದ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
Recent comments