ಬಾಲಸ್ವಾಮಿ ಕೊಡ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ನಡುಕ ಹುಟ್ಟಿಸಿದ ಲಿಂಗಸೂಗುರು ಪಕ್ಷೇತರ ಅಭ್ಯರ್ಥಿ…….
ಬಾಲಸ್ವಾಮಿ ಕೊಡ್ಲಿ ರಾಷ್ಟ್ರೀಯ ಮತ್ತು ಪ್ರದೇಶಿಕ ಪಕ್ಷಗಳಿಗೆ ನಡುಕ ಹುಟ್ಟಿಸಿದ ಲಿಂಗಸೂಗುರು ಪಕ್ಷೇತರ ಅಭ್ಯರ್ಥಿ…….
ಲಿಂಗಸೂಗುರು ಮೀಸಲು ವಿಧಾನ ಸಭಾ ಕ್ಷೇತ್ರ ಈಗ ಭಾರಿ ಸುದ್ದಿಯಲ್ಲಿದೆ. ಸುಮಾರು ಆರು ತಿಂಗಳುಗಳಿಂದ ಮಾದಿಗ ಸಮಾಜದ ಅಭ್ಯರ್ಥಿಗಳಿಗೆ ಯಾವ ಪಕ್ಷ ಟಿಕೇಟ್ ನಿಡುತ್ತದಯೋ ಅಂತಹ ಪಕ್ಷಕ್ಕೆ ನಮ್ಮ ಬೆಂಬಲ ಘೋಸಿಸುತ್ತೇವೆ ಎಂದು ಮಾದಿಗ ಸಮುದಾಯದ ನಾಯಕರುಗಳು ಒತ್ತಾಯಿಸಿದ್ದರು , ಆದರೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷದವರು ಕ್ಯಾರೆ ಎನ್ನದೇ ಇವರ ಒತ್ತಾಯವನ್ನು ದಿಕ್ಕರಿಸಿದ್ದಕ್ಕೆ ಇಂದು ತಮ್ಮ ಅಸ್ಪರ್ಶ್ಯ ಮಾದಿಗ ಜನಾಂಗದ ಅಭ್ಯರ್ಥಿಯಾದ ಬಾಲಸ್ವಾಮಿ ಕೊಡ್ಲಿ ಯವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ.
ಅಸ್ಪರ್ಶ್ಯ ಮಾದಿಗ ಜನಾಂಗದ ಅಭ್ಯರ್ಥಿ ಕಣಕ್ಕೆ ಇಳಿಯಲು ಕಾರಣ.?
ಸುಮಾರು ವರ್ಷಗಳಿಂದ ಒಳ ಮೀಸಾಲತಿಗಾಗಿ ಹೋರಾಟ ಮಾಡಿಕೊಂಡು ಬರುತ್ತೀರುವ ಮಾದಿಗ ಮೀಸಲಾತಿ ಹೋರಾಟ ಸಮೀತಿ ಇಂತಹ ಒಂದು ನಿರ್ಧರಕ್ಕೆ ಕಾರಣರಾಗಿದ್ದಾರೆ, ಸದಾಶಿವಾ ಅಯೋಗ ವರದಿ ಜಾರಿಗೆಗಾಗಿ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿತ್ತು ಅಲ್ಲದೆ ತಮ್ಮ ಅಸ್ಪರ್ಶ್ಯ ಜನಾಂಗದ ನಾಯಕರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ಅಂಚಿಕೆ ಮಾಡಬೇಕೆಂದು ಒತ್ತಾಯಿಸಿತ್ತು.ಆದರೆ ಈ ಯ್ಯಾವ ಬೇಡಿಕೆಗಳನ್ನು ಕೈಗೆ ಎತ್ತಿಕೊಳ್ಳದೆ, ಮಾದಿಗ ಜನಾಂಗಕ್ಕೆ ಅನ್ಯಾಯಮಾಡಿದ್ದಾರೆ ಎಂದು ಎಲ್ಲಾ ಅಸ್ಪರ್ಶ್ಯ ಮಾದಿಗ ಜನಾಂಗದವರೆಲ್ಲ ಒಟ್ಟಾಗಿ ತಮ್ಮ ಅಭ್ಯರ್ಥಿಯಾದ ಬಾಲಸ್ವಾಮಿ ಕೊಡ್ಲಿ ಯವರನ್ನು ಕಣಕ್ಕೆ ಇಳಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಶೆಡ್ಡು ಒಡೆದಿದ್ದಾರೆ.ಈ ಸಂರ್ಧಭದಲ್ಲಿ ಮಾದಿಗ ಮೀಸಲಾತಿ ಹೋರಟ ಸಮಿತಿಯವರಾದ ದಾನಪ್ಪ ಅರೋಲಿಕರ್ , ಅಂಬಣ್ಣ ಅರೋಲಿಕರ್,ಸಿ.ದಾನಪ್ಪ ನಿಲೋಗಲ್ ದೊಡ್ಡಪ್ಪ ಮುರಾರಿ ಅವರು ಸಾಥ್ ನಿಡಿದರು.
ಅಲ್ಲದೆ ಮಾದಿಗ ಜನಾಂಗವನ್ನ ಕಡೆಗಾಣಿಸಿದ ಸರ್ಕಾರಗಳಿಗೆ ಎಲ್ಲಾ ಮಾದಿಗ ಸಮುದಾಯದವರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ ಬೇಕೆಂದು ಕರೆಕೊಟ್ಟರು.ಈ ಎಲ್ಲಾ ಬೆಳವಣಿಗೆಯಿಂದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ನಡುಕ ಶುರವಾಗಿದೆ.
ಲಿಂಗಸೂಗುರು ಎಸ್ಸಿ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಬಾಲಸ್ವಾಮಿ ಕೊಡ್ಲಿ ನಾಮಪತ್ರಸಲ್ಲಿಕೆ .
ತಮ್ಮ ಜನಾಂಗಕ್ಕೆ ಅನ್ಯಯಾವಾಗಿದೆ ಇನ್ನೂ ಮುಂದೆ ಯಾವ ಪಕ್ಷಗಳು ನಮ್ಮ ಅಸ್ಪರ್ಶ್ಯ ಮಾದಿಗ ಜನಾಂಗವನ್ನ ಕಡೆಗಣಿಸಬಾರದು ಎಂದು ಎಲ್ಲಾ ಮಾದಿಗ ಜನಾಂಗ ತಮ್ಮ ಅಭ್ಯರ್ಥಿಗೆ ಭಾರಿ ಬೆಂಬಲ ತೋರಿಸುವ ಮುಖಾಂತರ ನಾಮಪತ್ರಸಲ್ಲಿಕೆಯ ಕಾರ್ಯಾಕ್ರಮದಲ್ಲಿ ಬಾಗಿಯಾಗಿದ್ದರು.
Recent comments