ಥೂ ಥೂ ಥೂ ಅಸಹ್ಯ.. ನಿರ್ದೇಶಕನಾ ಇವ್ನು..? ಉಗೀರಿ ಮುಖಕ್ಕೆ.. ನಾಚಿಕೆಯಾಗ್ಬೇಕು..
ಥೂ ಥೂ ಥೂ ಅಸಹ್ಯ.. ನಿರ್ದೇಶಕನಾ ಇವ್ನು..? ಉಗೀರಿ ಮುಖಕ್ಕೆ.. ನಾಚಿಕೆಯಾಗ್ಬೇಕು..
ರೇಪ್ ಮಾಡುವ ಪುರುಷರ ಕಾಮದಾಹ ತೀರಿಸಲು ಮಹಿಳೆಯರು ಸಹಕರಿಸಬೇಕು. ಹೀಗೆಂದವನು ಇದೇ ನಿರ್ದೇಶಕ ನೋಡಿ. ಹೆಂಗಸರು ಅದಕ್ಕಾಗಿ ದಿನವೂ ತಮ್ಮ ಬ್ಯಾಗ್ ನಲ್ಲಿ ಕಾಂಡೋಮ್ ಇಟ್ಟುಕೊಂಡರೆ ಸಾಕತ್ತೆ. ಒಂದು ವೇಳೆ ಇಂತಹ ಪುರುಷರಿಗೆ ಸಹಕರಿಸಿದರೆ ಅವರ ಬಯಕೆ ತೀರಿದ ಬಳಿಕ ಕೊಲೆ ಮಾಡದೇ ಬಿಟ್ಟು ಬಿಡುತ್ತಾರಂತೆ.. ನೋಡಿ ನೋಡಿ ಇವ್ನಾ ಹೇಳಿಕೆಯನ್ನ.. ಹೀಗೊಂದು ಹುಚ್ಚಾಟದ ಮಾತೇಳಿದ್ದು ನಿರ್ದೇಶಕ ಡೇನಿಯಲ್ ಶ್ರವಣ್. ಅತ್ಯಾಚಾರ ಮಾಡಿ ಪೈಶಾಚಿಕವಾಗಿ ಕೊಲೆ ಮಾಡುವ ದುರುಳರಿಂದ ರಕ್ಷಿಸಿಕೊಳ್ಳಲು ಇಂತಹದ್ದೊಂದು ಕಿತ್ತೋಗಿರೋ ಐಡಿಯಾ ಹಂಚಿಕೊಂಡಿದ್ದಾರೆ.
ಇದನ್ನು ಓದಿದ ಜನ ಈಗ ಚಿತ್ರ ನಿರ್ಮಾಪಕನನ್ನು ಹಿಗ್ಗಾ ಮುಗ್ಗಾ ಜಾಡಿಸುತ್ತಿದ್ದಾರೆ. 'ಕೊಲೆ ಮಾಡದೇ ಕೇವಲ ಅತ್ಯಾಚಾರ ಮಾಡುವುದನ್ನು ಸರ್ಕಾರ ಕಾನೂನುಬದ್ಧಗೊಳಿಸಬೇಕು. 18 ಕ್ಕಿಂತ ಮೇಲ್ಪಟ್ಟ ವಯಸ್ಸಿನ ಹುಡುಗಿಯರಿಗೆ ಅತ್ಯಾಚಾರದ ಬಗ್ಗೆ ಶಿಕ್ಷಣ ನೀಡಬೇಕು. ಉದಾಹರಣೆಗೆ ಹುಡುಗಿಯರು ಪುರುಷರ ಲೈಂಗಿಕ ಬಯಕೆಯನ್ನು ತಡೆಯಬಾರದು. ಆಗಲೇ ಇಂತಹ ಕೊಲೆ ಪ್ರಕರಣವನ್ನು ನಿಲ್ಲಿಸಲು ಸಾಧ್ಯ. ವೀರಪ್ಪನ್ ಕೊಂದಿದ್ದರಿಂದ ಕಳ್ಳಸಾಗಣೆ ತಡೆಯಲು ಸಾಧ್ಯವಾಗಿಲ್ಲ, ಲಾಡೆನ್ ಕೊಂದ ಮಾತ್ರಕ್ಕೆ ಉಗ್ರವಾದ ನಿಲ್ಲಲಿಲ್ಲ.
ಅದೇ ರೀತಿ ನಿರ್ಭಯಾ ಅಪರಾಧಿಗಳಿಗೆ ಶಿಕ್ಷೆ ಜಾರಿ ಮಾಡಿರುವುದರಿಂದ ಅತ್ಯಾಚಾರ ನಿಲ್ಲಲಿಲ್ಲ. ವಿಶೇಷವಾಗಿ ಭಾರತೀಯ ಮಹಿಳೆಯರಿಗೆ ತಿಳುವಳಿಕೆ ನೀಡಬೇಕು (18 ವಯಸ್ಸು ದಾಟಿದ ಮೇಲೆ ಕಾಂಡೋಮ್ ಬ್ಯಾಗ್ ನಲ್ಲಿಟ್ಟುಕೊಂಡು ಹೋಗುವುದು ಇತ್ಯಾದಿ) ಇದು ತುಂಬಾ ಸಿಂಪಲ್ ಲಾಜಿಕ್. ಪುರುಷರ ಲೈಂಗಿಕ ಬಯಕೆ ಈಡೇರಿದರೆ ಅವರು ಮತ್ತೆ ಆ ಮಹಿಳೆಯನ್ನು ಕೊಲೆ ಮಾಡಲ್ಲ. ಸರ್ಕಾರ ಇದು ಕಾನೂನುಬದ್ಧಗೊಳಿಸಬೇಕು' ಎಂದು ಸುದೀರ್ಘವಾಗಿ ಡೇನಿಯಲ್ ಬರೆದುಕೊಂಡಿದ್ದಾರೆ. ಇವರ ಈ ಐಡಿಯಾ ಓದಿದ ಜನ ಮೊದಲು ಇಂತಹಾ ಮೆಂಟಾಲಿಟಿಯ ಜನರನ್ನು ಸರ್ಕಾರ ಸ್ವಯಂಪ್ರೇರಿತವಾಗಿ ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು. ಇಂತಹ ಮೆಂಟಾಲಿಟಿ ಇರುವವರಿಂದಲೇ ಸಮಾಜ ಹಾಳಾಗುತ್ತಿದೆ ಎಂದು ನಿರ್ಮಾಕನಿಗೆ ಕ್ಲಾಸ್ ತೆಗೆದುಕೊಳ್ತಿದ್ದಾರೆ.
Recent comments