ಸಿರಾವಾರ ಕನಸಿನ ಸರಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಶಂಕು ಸ್ಥಾಪನೆ .
ಸಿರವಾರ ಸರಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ .
ಸಿರವಾರ:ಮಾನ್ವಿ ವಿಧಾನಸಭಾ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಇವರು ಸಿರವಾರ ಪಟ್ಟಣದಲ್ಲಿ ನಡೆದ 2018-19 ಸಾಲಿನ ಎಸ್ ಡಿ ಪಿ ಯೋಜನೆ ಅಡಿಯಲ್ಲಿ ಸುಮಾರು 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಡಿಗ್ರಿ ಕಾಲೇಜು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.ನೂತನ ತಾಲೂಕಿನ ಬಹುವರ್ಷಗಳ ಜನರ ಕನಸಿನ ಪದವಿ ಕಾಲೇಜು ನಿರ್ಮಾಣಕ್ಕೆ ಶಾಸ್ತ್ರೋಪ್ತವಾಗಿ ಮಾನ್ವಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಮಾನ್ವಿ ಇವರು ಶಂಕುಸ್ಥಾಪನೆ ಮಾಡುವ ಮೂಲಕ ಈ ಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುದಿನಗಳ ಬೇಡಿಕೆಯ ಡಿಗ್ರಿ ಕಾಲೇಜಿಗಿನ ಕನಸಿಗೆ ಭುನಾದಿ ಹಾಕಿದ್ದಾರೆ.ಇದೇ ವೇಳೆ ಮಾತನಾಡಿದ ಶಾಸಕರು ಇಲ್ಲಿ ಕಾಲೇಜು ಸ್ಥಾಪನೆ ಆಗಿದ್ದು ಬಹಳ ಸಂತೋಷವಾಗಿದೆ ಈ ಒಂದು ಕಾಲೇಜನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕರು ಹೇಳಿದರು.
ಇದೆ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಮುಂಖಡರಾದ ಶ್ರೀ ರಾಜಾ ರಾಮಚಂದ್ರ ನಾಯಕ,ತಾಲ್ಲೂಕು ಜೆಡಿಎಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೇಲ ಬಲ್ಲಟಿಗಿ, ಜೆಡಿಎಸ್ ಹಿರಿಯ ಮುಂ ಜಿ ಲೋಕರೆಡ್ಡಿ ಸಿರವಾರ, ಜಂಬುನಾಥ ಯಾದವ, ಖಲೀಲ ಖುರೀಷ, ನಾಗರಾಜ ಭೋಗಾವತಿ,ಪಟ್ಟಣ ಪಂಚಾಯತ ಸದ್ಯಸರಾದ ಇಮಾಮ ಸಿರವಾರ, ಗೋಪಾಲ ನಾಯಕ ಹರವಿ, ಚಂದ್ರಶೇಖರ ಸ್ವಾಮಿ, ಈಶಾಪ್ಪ ಹೂಗಾರ್,ಕಾಶಿನಾಥ ಸರೋದ್,ದುರುಗಪ್ಪ ಬಿಚ್ಚಾಲಿ,ಮಹಿಳಾ ಘಟಕ ಅದ್ಯಕ್ಷ ವಿಜಯಲಕ್ಷ್ಮಿ ಸಿರವಾರ,ನಗರ ಘಟಕ ಅದ್ಯಕ್ಷ ನಾಗರಾಜ ಗೌಡ ಸಿರವಾರ,ಮಲ್ಲಿಕಾರ್ಜುನ ಗೌಡ ಶಾಖಾಪೂರ, ವಜ್ರದ್ಯ ನಾಯಕ ಮಾಚನೂರು, ಎಸ್ ಯಕೋಬ ಮಾನವಿ,ಗುರುರಾಜ ಕುಲಕರ್ಣಿ,ಸೂರಿ ಅಮರೇಶ ನಾಯಕ,ಯಲಪ್ಪ ನಾಯಕ ಸಿರವಾರ,ಪ್ರಕಾಶಪ್ಪ ಸಿರವಾರ, ಶಾಂತಪ್ಪ ಪಿತಗಲ್, ರಾಜಶೇಖರ ನಾಯಕ ನವಲಕಲ್, ಪಂಪಾಪತಿ ನಾಯಕ ಅತ್ತನೂರು, ಶರಣಬಸವ ಸಿರವಾರ,ಅದೇಪ್ಪ ಸಾಹೂಕಾರ, ಕಾಲೇಜಿನ ಪ್ರಾಂಶುಪಾಲರು,ಎಸ್ ಡಿ ಪಿ ಜಿ ಇ ಶಾಂತಪ್ಪ ಉಪಸ್ಥಿತಿರಿದ್ದರು
Recent comments