ಶಹಾಪುರ ಯುವತಿಯರಿಂದ “ಲಾಕ್ ಡೌನ್ “ನ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಉಪಹಾರ.
ಶಹಾಪುರ ಯುವತಿಯರಿಂದ “ಲಾಕ್ ಡೌನ್ “ನ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಉಪಹಾರ.
ಶಹಾಪುರ: ಒಂದೇಡೆ ಕೊರೊನಾ ವೈರಲ್ ಭೀತಿಯಿಂದ ಭಾರತ ಲಾಕ್ ಡೌನ್ ಆಗಿದೆ ಇನ್ನೋದೆಡೆ ವೈದ್ಯರು ಹಾಗೂ ಪೊಲೀಸರು ಜನರಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಈ ಹಿನ್ನೆಲೆ ಕರ್ತವ್ಯ ನಿರತ ಪೊಲೀಸರು ಹಾಗೂ ಲಾಕ್ ಡೌನ್ ನಿಂದ ತೊಂದರೆ ಅನುಭವಿಸುತ್ತಿರು ಜನರಿಗೆ ಶಹಾಪೂರ ಪಟ್ಟಣದಲ್ಲಿ ಯುವತಿಯರು ಉಪಹಾರ ಹಾಗೂ ನೀರನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸಂಗೀತಾ ಹೂಗಾರ, ಸುರೇಖಾ ಕುಂಬಾರ ಹಾಗೂ ಮಧು ಎಂಬುವವರು ನೀರು ಉಪಹಾರ ಹಂಚಿದ್ದಲ್ಲದೇ, ಈ ಸಮಯದಲ್ಲಿ ನೆರವಾಗಲಿ ಎಂದು ರಕ್ತದಾನವನ್ನೂ ಸಹ ಮಾಡಿದ್ದಾರೆ.
Recent comments