ಪ್ರಥಮ್ ಸಂಭಾವನೆ ನಿರಾಕರಿಸಿದ ನಟ ಧೃವ ಸರ್ಜಾ.
ನಟಭಯಂಕರ ಸಿನಿಮಾಕ್ಕೆ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಎಂಟ್ರಿ .
ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಮತ್ತೊಂದು ಚಿತ್ರ,ಮೇಕಿಂಗ್ನಿಂದಲೇ ಕ್ಯೂರಿಯಾಸಿಟಿ ಉಟ್ಟಿಸಿ,ಬಹಳಷ್ಟು ವಿಶೇಷತೆಯಿಂದ ಕೂಡಿರೋ ನಟಭಯಂಕರ ಸಿನಿಮಾತಂಡಕ್ಕೆ ನಟ ಆಕ್ಷನ್ ಪ್ರಿನ್ಸ್ ಧೃವಸರ್ಜಾ ಎಂಟ್ರಿ ಕೊಟ್ಟಿದ್ದಾರೆ.ಈಗಾಗಲೇ ಚಂದನವನದಲ್ಲಿ ಅಲೆ ಸೃಷ್ಟಿಸಿರೋ ಚಿತ್ರ "ನಟಭಯಂಕರ".ಚಿತ್ರಕ್ಕೆ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ .
ಪ್ರಥಮ್ ನಿರ್ದೇಶನ ಹಾಗು ನಟನೆಯ "ನಟ ಭಯಂಕರ" ಚಿತ್ರಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರವ ಸರ್ಜಾ ಸಾಥ್ ನೀಡಿದ್ದು,ಈ ಚಿತ್ರಕ್ಕೆ ಇತ್ತೀಚೆಗೆ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಚಿತ್ರಕ್ಕೆ ಹಿನ್ನಲೆ ಧ್ವನಿ ನೀಡಿದ್ದಾರೆ. ವಿಶೇಷವೆಂದರೆ ದ್ರುವಸರ್ಜಾ ಪ್ರಥಮ್ ಅವರ ಮೇಲಿನ ಪ್ರೀತಿಗೆ ಕಟ್ಟಿಬಿದ್ದು ಹಿನ್ನೆಲೆ ಧ್ವನಿ ನೀಡಿದ್ದಾರೆ ಎಂದು ಹೇಳಿದ್ದಾರೆ . ಅಲ್ಲದೇ ನನಗೆ ಯಾವುದೇ ಸಂಭಾವನೆ ಬೇಡ ಎಂದು ಧ್ರವ ಸರ್ಜಾ ತಿಳಿಸಿದ್ದಾರೆ.
ಹಾಗಾಗಿ ನಟ ಪ್ರಥಮ್ ಆ ಸಂಭಾವನೆಯನ್ನು ಬೇಸಿಗೆಯ ತಾಪಕ್ಕೆ ಬಳಲುತ್ತಿರುವ ಗೋವುಗಳ ಮೇವಿಗಾಗಿ ಗೋಶಾಲೆಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯದಲೇ ಚಿತ್ರದ ಆಡಿಯೋ ರಿಲೀಸ್ ಆಗಲಿದೆ.
Recent comments