ಪ್ರಪಂಚದ ಟಾಪ್ ಮೊಸ್ಟ್ ಗೋಸ್ಟ್ ಹಂಟರ್ ಕೊನೆಗೆ ಆತ್ಮಗಳಿಂದಲೇ ಬಲಿಯಾದರಾ..?
ಪ್ರಪಂಚದ ಟಾಪ್ ಮೊಸ್ಟ್ ಗೋಸ್ಟ್ ಹಂಟರ್
ಈ ಜಗತ್ತಿನಲ್ಲಿ ಆತ್ಮಗಳು ಇದೆಯೋ ಅಥವಾ ಇಲ್ವೋ ಅನ್ನೊದ್ರ ಬಗ್ಗೆ ಸಾಕಷ್ಟು ಚರ್ಚೆಗಳು ನೆಡೆದಿದೆ ನೆಡಿತಾನು ಇದೆ..ಯಾಕೆಂದರೆ ಮನುಷ್ಯ ಸತ್ತ ಮೇಲೆ ನಿಜಕ್ಕೂ ಆತ್ಮ ಆಗಿ ನಮ್ಮ ನಿಮ್ಮೆಲ್ಲ ಮದ್ಯನೇ ಇರುತ್ತಾ..? ಆಥವಾ ಸತ್ತು ನೇರವಾಗಿ ನರಕ ಅಥವಾ ಸ್ವರ್ಗ ಸೇರ್ತಾರ ಅಥವಾ ಮಣ್ಣಲ್ಲಿ ಮಣ್ಣಾಗಿ ಅಸ್ತಿ ಪಂಜರವಾಗ್ತಾರ ಅನ್ನೋ ಹತ್ತು ಹಲವು ಪ್ರಶ್ನೆಗಳು ನಮ್ಮನೆಲ್ಲಾ ಕಾಡ್ತಾ ಇರುತ್ತೆ...ಇಂತಹ ಪ್ರಶ್ನೆಗಳನ್ನು ಹೊತ್ತು ದಿನ ನಿತ್ಯ ಓರ್ವ ಪ್ರಪಂಚದ ಮೊಸ್ಟ್ ಗೊಸ್ಟ್ ಹಂಟರ್ ಗೌರವ್ ತಿವಾರಿ ಹೇಲೋ ಪ್ರಕಾರ ಆತ್ಮ ಇದೆಯಾ ಎಂಬುದನ್ನ ಹೇಳ್ತೀವಿ ಮುಂದೆ ಓದಿ.
ಗೌರವ್ ತಿವಾರಿ ಈತ ಆತ್ಮ ಗಳ ಜೊತೆ ಮಾತನಾಡಿ ಸಂಶೋಧನೆಯನ್ನ ನಡೆಸುತ್ತಿದ್ದಂತಹ ವ್ಯಕ್ತಿ ಈತ ಸುಮಾರು ೬ ಸಾವಿರಕ್ಕೂ ಹೆಚ್ಚು ಭೂತ, ಪ್ರೇತ ಪ್ರಕರಣಗಳನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದ ಅದ್ರ ಅತಿ ಚಿಕ್ಕ ವಯಸ್ಸಿನಲ್ಲಿ ಸಾವನ್ನಪ್ಪಿದ ಆದ್ರೆ ಈತನ ಸಾವು ಹೇಗಾಯ್ತು ಅನ್ನೋದು ರಹಸ್ಯವಾಗಿ ಉಳಿದಿದೆ..ಅಂದಹಾಗೆ ಗೌರವ್ ತಿವಾರಿ ಹುಟ್ಟಿದ್ದು ೧೯೮೪, ಸೆಪ್ಟೆಂಬರ್ ೨ರಂದು ಪಾಟ್ನಾದಲ್ಲಿ ಜನಿಸುತ್ತಾರೆ.ಗೌರವ್ ಮೂಲತಃ ಪೈಲೆಟ್ ಆಗಿತ್ತಾರೆ ಹೀಗಾಗಿ ಟ್ರೈನಿಂಗ್ ಗೆ ಅಂತ ಟೆಕ್ಸಸ್ ಗೆ ಬಂದಿರುತ್ತಾರೆ ಹಾಗೂ ಇವರ ಸ್ನೇಹಿತರು ಸೇರಿ ಅಲ್ಲಿ ಒಂದು ರೂಂ ಅನ್ನ ಮಾಡಿಕೊಂಡಿರುತ್ತಾರೆ.
ಗೌರವ್ ತಿವಾರಿ ಹೇಳೋ ಪ್ರಕಾರ ಆ ಮನೆಯಲ್ಲಿ ಒಂದು ಹೆಣ್ಣಿನ ಆತ್ಮ ಬಹಳ ತೊಂದರೆ ಕೊಟ್ಟಿತಂತೆ ಈವೆಲ್ಲವನ್ನು ಅವ ಸ್ನೇಹಿತರು ಹೇಳಿದಾಗ ಅಲ್ಲಿಯವರೆಗೆ ಈ ಭೂತ, ಪ್ರೇತ್ಮಾತ್ಮ ಗಳ ಬಗ್ಗೆ ಒಂದುಚೂರು ನಂಬಿಕೆ ಇರಲ್ಲವಂತೆ.. ಹೀಗಾಗಿ ತನ್ನ ಸ್ನೇಹಿತರು ಹೇಳಿದ ವಿಷಯಗಳನ್ನ ಬಹಳ ಗಂಭೀರವಾಗಿ ತೆಗೆದುಕೊಂಡ ಗೌರವ್ ಈ ವಿಷಯಗಳ ಬಗ್ಗೆ ಅಧ್ಯಯನದಕ್ಕಾಗಿ ಫ್ಲೋರಿಡಾದ ಒಂದು ಯುನಿವರ್ಸಿಟಿಗೆ ಸೇರಿಕೊಳ್ಳುತ್ತಾರೆ, ಈ ವಿಷಯದಲ್ಲಿ ಪ್ಯಾರನರ್ಮಲ್ ಸರ್ಟಿಫಿಕೇಟ್ ಅನ್ನ ಸಹ ಪಡೆಯುತ್ತಾರೆ ಗೌರವ್..ನಂತರ ಅಲ್ಲಿಂದ ಬಂದ ಬಳಿಕ ಈ ಆತ್ಮಗಳ ಆಧ್ಯಯನಕ್ಕಾಗಿ ಇಂಡಿಯನ್ ಪ್ಯಾರನರ್ಮಲ್ ಸೊಸೈಟಿಯನ್ನ ಸ್ಥಾಪನೆ ಮಾಡ್ತಾರೆ ಅದ್ರಲ್ಲಿ ಸಾವಿನ ನಂತರ ಜೀವನ ಹಾಗೂ ಈ ಆತ್ಮಗಳ ಕುರಿತು ಜನ ಜಾಗೃತಿಯನ್ನ ಮೂಡಿಸಿರುತ್ತಾರೆ.
ಗೌರು ತಿವಾರಿ ಅವರು ಹಲವಾರು ಟಿವಿ ಕಾರ್ಯಕ್ರಮ ಗಳನ್ನ ನಡೆಸಿಕೊಟ್ಟಿದ್ದಾರೆ ಹಾಗೇ ಗೌರವ್ ತಿವಾರಿ ಸುಮಾರು ೬ ಸಾವಿರ ನಿಗೂಢ ಸ್ಥಳಗಳಿಗೆ ಭೇಟಿಯನ್ನ ನೀಡಿರುತ್ತಾರೆ..ನಂತರ ಸ್ಥಾಪಿಸಿದ ಸಂಸ್ಥೆಗೆ ಈ ಭೂತ ಪ್ರೇತ್ಮಗಳ ಕುರಿತು ನೂರಾರು ಕಾಲ್ ಗಳು, ಇ ಮೇಲ್ ಗಳು ಬರುತ್ತಿರುತ್ತಾವೆ ಆದ್ರ ಗೌರವ್ ಸಂಶೋಧನೆ ಬಗ್ಗೆ ಅಧ್ಯಯನ ಮಾಡೋದು ಅವರ ಪತ್ನಿಗೆ ಇಷ್ಟವಿರಲಿಲ್ಲ..ಆದ್ರೆ ಗೌರವ್ ಸಾಯೋದಕ್ಕೂ ೧ ತಿಂಗಳ ಮುಂಚೆ ತನ್ನ ತಂದೆ ಬಳಿ ಒಂದು ವಿಷಯ ವನ್ನ ಹೇಳಿಕೊಂಡಿದ್ರು ಅದೇನಪ್ಪಾ ಅಂದ್ರೆ. ನಂಗೆ ಕೆಲವೊಂದು ನಕಾರತ್ಮ ಶಕ್ತಿಗಳು ಕಾಡುತ್ತಿ, ಅವುಗಳ ನನ್ನ ಬೆನ್ನಟ್ಟುತ್ತಿವೆ, ಅವುಗಳನ್ನ ನಿಯಂತ್ರಿಸಲು ನನ್ನ ಕೈಯಿಂದ ಸಾಧ್ಯವಾಗ್ತಿಲ್ಲ ಅಂತ ಹೇಳಿಕೊಂಡಿರುತ್ತಾರೆ.
ಆದ್ರೆ ಅವರ ತಂದೆ ಅತಿಯಾದ ಕೆಲಸದ ಒತ್ತಡದಿಂದ ಗೌರವ್ ಈ ರೀತಿ ಮಾತನಾಡಿತ್ತಿದ್ದಾನೆ ಎಂದು ಈ ವಿಷಯದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ, ತನ್ನ ಪತ್ನಿ ಜೊತೆಗೂ ಈ ವಿಷಯ ವನ್ನ ಹೇಳಿಕೊಂಡೊದ್ರು ನಾನು ಸದ್ಯದಲ್ಲೇ ನನ್ನ ಸಂಶೋಧನೆಯನ್ನ ಕೈಬಿಡುತ್ತಿದ್ದೇನೆ ಅಂತ ಹೇಳಿದ್ರು,. ಆದ್ರೆ ೨೦೧೬ ಜುಲೈ ೨ ರಂದು ಗೌರವ್ ಬಾತ್ ರೂಂ ಗೆ ಹೋದಾಗ ೧೦ ನಿಮಿಷಗಳ ಕಾಲ ಹೊರ ಬರಲೇ ಇಲ್ಲ ಆಗ ಎಲ್ಲಿ ದೊಡ್ಡ ಶಬ್ದ ಹಾಗೂ ಜೋರಾಗಿ ಕಿರುರುಚಿಕೊಳ್ಳುತ್ತಾರೆ ನಂತರ ಬಾತ್ ರೂಂನ ಬಾಗಿಲು ಹೊಡೆದು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುತ್ತಾರೆ ನಂತರ ಅವರನ್ನ ಆಸ್ಪತ್ರೆಗೆ ದಾಖಲಿಸುವಾಗ ಗೌರವ್ ಮಾರ್ಗಮಧ್ಯದಲ್ಲಿ ಸಾವನ್ನಪ್ಪುತ್ತಾರೆ.
ಆದ್ರೆ ಗೌರವ್ ಸತ್ತಾಗ ಮನುಷ್ಯನ ಕುತ್ತಿಗೆ ಬಳಿ ಕಪ್ಪು ಗುರುತು ಮೂಡಿರುತ್ತೆ ಅಂತ ಸಾಯೋದಕ್ಕೂ ಮೊದಲು ತನ್ನ ಪತ್ನಿ ಬಳಿ ಹಂಚಿಕೊಂಡಿದ್ರು..ಈ ರೀತಿ ಗೌರವ್ ತಿವಾರಿ ತನ್ನ ೩೧ ವರ್ಷ ದಲ್ಲಿ ಸಾವನ್ನಪ್ಪಿದರು ಈ ಬಗ್ಗೆ ಹಲವು ಊಹಾಪೋಹಗಳು ಹುಟ್ಟಿಕೊಂಡವು ಕೆಲವರು ಅವನ ಸಾಂಸಾರಿಕ ಜೀವನ ಚನ್ನಾಗಿರಲ್ಲಿಲ್ಲ ಅದಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಂದ್ರು, ಇನ್ನು ಕೆಲವರು ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ ಅಂದ್ರು, ಇನ್ನು ಕೆಲವರು ಈತನನ್ನ ಕೆಲವೊಂದು ನಕರಾತ್ಮಕ ಶಕ್ತಿ ಕತ್ತು ಹಿಸುಕಿ ಸಾಯಿಸಿದೆ ಅಂದ್ರು ಈ ರೀತಿ ಊಹಾಪೋಹಗಳೇ ಹುಟ್ಟಿಕೊಂಡವೇ ಹೊರತು ಗೌರವ್ ಸಾವಿಗೆ ನಿಖರ ಕಾರಣ ತಿಳಿಯಲಿಲ್ಲ.
Recent comments