ಪ್ರೇಕ್ಷಕರಿಗೆ ಚಾಲೇಂಜ್ ಹಾಕಿದ “ನಿನಾಸಂ ಸತೀಶ್”
ರೀಲಿಸ್ ಗೆ ಮುಂಚೆ “ಬ್ರಹ್ಮಚಾರಿ” ಸಕ್ಸಸ್ ಪ್ರೇಸ್ ಮಿಟ್.
ಕನ್ನಡ ಚಿತ್ರರಂಗದಲ್ಲಿ ಇತ್ತಿಚಿಗೆ ವಿವಿಧ ವಿಭಿನ್ನ ಹೊಸ ಹೊಸ ಕಾನ್ಸಪ್ಟ್ ನೊಂದಿಗೆ ಕನ್ನಡ ಪ್ರೇಕ್ಷಕರನ್ನ ರಂಜಿಸಲು , ಮನೋರಂಜನೆಯ ಚಿತ್ರಗಳನ್ನ ನಿರ್ಮಾಣ ಮಾಡುತ್ತಿದ್ದಾರೆ, ಅಂತಹ ಚಿತ್ರಗಳ ಸಾಲಿನಲ್ಲಿ ಈ ವಾರ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತೀರುವ ಚಿತ್ರ “ ಬ್ರಹ್ಮಚಾರಿ” .ಉದಯ್ ಕೆ ಮೇಹತ್ ಅವರ ನಿರ್ಮಾಣದ ಚಿತ್ರ ಈಗಾಗಲೇ ಸ್ಸೆನ್ಸರ್ ಆಗಿದ್ದು, ಯು /ಎ ಸರ್ಟಿಪೀಕೆಟ್ ಪಡೆದುಕೊಂಡು ತೆರೆಗೆಬರಲು ಸಿದ್ದವಾಗಿದೆ.
ವಿಶೇಷವೆಂದರೆ ಈ ಚಿತ್ರ ವಿಭಿನ್ನ ಟೈಟಲ್ ನಿಂದ ಪ್ರೇಕ್ಷಕರಲ್ಲಿ ಕೂತುಹಲ ಹುಟ್ಟಿಸಿದ್ದು, ಚಿತ್ರದಲ್ಲಿ ಬಹುದೊಡ್ಡ ತಾರ ಬಳಗವನ್ನ ಹೊಂದಿದೆ. ಸ್ಯಾಂಡಲ್ ವುಡ್ ನಟ ಲೂಸಿಯ ಚಿತ್ರದ ಖ್ಯಾತಿಯ ನಟ ಸತೀಶ್ ನಿನಸಂ ಅವರು ಚಿತ್ರದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ಒಂದು ವಿಶೀಷ್ಟ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದಲ್ಲಿನ ಪಾತ್ರ ಬಗ್ಗೆ ಮಾತನಾಡುತ್ತ ಪಕ್ಕ ಪ್ಯಾಮಿಲಿ,ಕಾಮಿಡಿ, ಎಂಟರ್ ಟೇನ್ ಮೆಂಟ್ ಚಿತ್ರ ಇದಾಗಿದ್ದು ಚಿತ್ರ ನೋಡಿದ ಪ್ರತಿಯೊಬ್ಬರು ಕೂಡ “ ನಗು” ಮುಖದಿಂದ ಹೊರ ಬಂದೆ ಬರುತ್ತಾರೆ, ಎಂದು ಚಾಲೇಂಜ್ ಹಾಕಿದ್ದಾರೆ. ಅಂದರೆ ಈ ಚಿತ್ರ ಅಷ್ಟೊಂದು ಪ್ರಮುಖವಾಗಿದೆ ಎನ್ನುತ್ತಾರೆ.ಇನ್ನೂ ಚಿತ್ರದ ವಿಶೇಷವೆಂದರೆ ಸತೀಶ್ ನಿನಾಸಂ ಅವರ ಕಳೆದ ಚಿತ್ರ “ಲವ್ ಇನ್ ಮಂಡ್ಯ “ ಚಿತ್ರ ಕೂಡ ನಂವೆಬರ್ ತಿಂಗಳು 28ರಂದು ರಿಲೀಸ್ ಆಗಿದ್ದು, ಈ ಚಿತ್ರವೂ ಕೂಡ ಇದೇ ತಿಂಗಳು 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಳ್ಳುತ್ತಿದೆ. ಇನ್ನೂ ಚಿತ್ರದಲ್ಲಿ ಹಿರಿಯನಟ ದತ್ತಣ್ಣ ,ನಾಯಕಿ ನಟಿಯಾಗಿ ಅಧಿತಿ ಪ್ರಭುದೇವ್ ,ಶಿವರಾಜ್ ಕೆ.ಆರ್,ಪೇಟೆ ಇನ್ನಿತರರು ನಟಿಸಿದ್ದಾರೆ.
Recent comments