ನೀವು ಸಹ ಕಲವಿದರಾಗಬೇಕೆ ಹಾಗಾದ್ರೆ ಇಲ್ಲಿದೆ ನಿಮ್ಗೆ ಒಂದೊಳ್ಳೆ ದಾರಿ.
ನೀವು ಸಹ ಕಲವಿದರಾಗಬೇಕೆ ಹಾಗಾದ್ರೆ ಇಲ್ಲಿದೆ ನಿಮ್ಗೆ ಒಂದೊಳ್ಳೆ ದಾರಿ.
https://www.youtube.com/watch?v=yRxEGbV1mMA (To watch video click on this link )
ಕನ್ನಡ ಚಿತ್ರರಂಗದ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಲಿರುವ ಡೈಲ್ ಆರ್ಟಿಸ್ಟ್ ಅಪ್ ಸಹಜವಾಗಿ ಯಾವುದೇ ಚಿತ್ರಗಳಿಗೆ ಕಥೆಗೆ ಸೂಕ್ತವಾದ ಪಾತ್ರಗಳಿಗೆ ತಕ್ಕಂತ ಕಲಾವಿದರನ್ನು ಆಯ್ಕೆ ಮಾಡುವುದು ಅತ್ಯಂತ ಕಷ್ಟಕರವಾದದ್ದು. ಈ ವೇಳೆ ಅನೇಕ ಯುವ ಪ್ರತಿಬಾನ್ವಿತ ಕಲಾವಿದರು ನಿರ್ದೇಶಕರು ಹಾಗೂ ನಿರ್ಮಾಪಕರ ಪರಿಚಯವಿಲ್ಲದೆ ಅವಕಾಶ ವಂಚಿತರಾದರೆ ಇನ್ನು ಚಿತ್ರರಂಗದಲ್ಲೇ ಇರುವಂಥ ಅನೇಕ ಕಲಾವಿದರೊಂದಿಗೆ ನಿರ್ದೇಶಕರು ಹಾಗೂ ನಿರ್ಮಾಪಕರು ಸಂಪರ್ಕ ಕೆಲ ಸಮಯದಲ್ಲಿ ಸಾಧ್ಯವಾಗದೇ ಇರುವುದರಿಂದ ಅನೇಕ ಹಿರಿಯ ಕಲಾವಿದರು ಅವಕಾಶ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಇಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೊಪಕ ವಾಗಿ ಡೈಲ್ ಆರ್ಟಿಸ್ಟ್ ಸಂಸ್ಥೆ ತನ್ನ ವಿಶೇಷ ಅಪ್ ನಲ್ಲಿ ಚಿತ್ರರಂಗದಲ್ಲಿ ಪ್ರಸ್ತುತ ಕಲಾವಿದರು ಸೇರಿದಂತೆ ಅತ್ಯುತ್ತಮ ಪ್ರತಿಭೆ ಯುಳ್ಳ ಯುವ ಕಲಾವಿದರು ಒಂದೆಡೆ ಲಭ್ಯವಿದ್ದು ನಿರ್ದೇಶಕರು ಹಾಗೂ ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ಪಾತ್ರಗಳಿಗೆ ಸೂಕ್ತವಾದ ಕಲಾವಿದರ ನ್ನು ಆಯ್ಕೆಮಾಡಿಕೊಳ್ಳಬಹುದಾದ ವಿಶೇಷತೆಯನ್ನು ಡೈಲ್ ಆರ್ಟಿಸ್ಟ್ ಅಪ್ ಹೊಂದಿದೆ ಎಂದು ಸಂಸ್ಥೆಯ ಸಂಸ್ಥಪಕ ಗುರುವೆಂದ್ರ ಶೆಟ್ಟಿ ತಿಳಿಸಿದರು.
ಅತ್ಯಾಧುನಿಕ ತಂತ್ರಜ್ಞಾನ ದಿಂದ ವಿನ್ಯಾಸಗೊಳಿಸಿರುವ ಈ ಅಪ್ ನಲ್ಲಿ ಕಲಾವಿದರು ಮಾತ್ರವಲ್ಲದೆ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಸುಮಾರು 50ಕ್ಕೊ ಹೆಚ್ಚು ವಿಭಾಗಗಳಲ್ಲಿ ನೋಂದಣಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದ್ದು . ಇದರಲ್ಲಿ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಹಾಗೂ ಅನುಭವಿ ಕಲಾವಿದರು ಇದರೊಂದಿಗೆ ನೂತನ ಯುವ ಕಲಾವಿದರು ಪ್ರತ್ಯೇಕವಾಗಿ ನೋಂದಾಹಿಸಿಕೊಳ್ಳುವಂತೆ ವಿನ್ಯಾಸಮಾಡಲಾಗಿದ್ದು ಅವುಗಳಲ್ಲಿ ಕಲಾವಿದರು ತಮ್ಮ ಸಂಪೂರ್ಣ ವಿವರಗಳೊಂದಿಗೆ ತಮ್ಮ ಭಾವಚಿತ್ರವನ್ನು ನೀಡಿದ್ದಲ್ಲಿ ಸೂಕ್ತ ಕಲಾವಿದರಿಗೆ ಅವಕಾಶ ನೀಡಲಿಚ್ಚಿಸುವ ನಿರ್ಮಾಪಕರು ಹಾಗೂ ನಿರ್ದೇಶಕರು ಡೈಲ್ ಆರ್ಟಿಸ್ಟ್ ಸಂಸ್ಥೆಯ ಮೂಲಕ ಕಲಾವಿದರನ್ನು ಸಂಪರ್ಕಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು
ವಿಶೇಷ ಅಪ್ ಬಿಡುಗಡೆ ಗೊಳಿಸಿ ಮಾತನಾಡಿದ ಹಿರಿಯ ನಟ ಶಶಿಕುಮಾರ್ ನೂತನ ಪ್ರತಿಭೆಗಳು ಹಾಗೂ ಕಲಾವಿದರನ್ನು ಗುರುತಿಸುವಂತಹ ಕಾರ್ಯ ಅತ್ಯಂತ ಪ್ರಮುಖವಾದ ದ್ದು ಚಿತ್ರದ ನಿರ್ದೇಶಕರಿಗೆ ಸೂಕ್ತವಾದಂ ತಹ ಕಲಾವಿದರು ಪಾತ್ರ ನಿರ್ವಹಣೆ ಮಾಡಬೇಕು ಈ ಮೂಲಕ ಆನೇಕ ಹಿರಿಯ ಕಲಾವಿದರಿಗೆ ಅವಕಾಶ ದೊರೆಯುವಂತಾಗಲಿ ಈ ನಿಟ್ಟಿನಲ್ಲಿ ಡೈಲ್ ಆರ್ಟಿಸ್ಟ್ ಸಂಸ್ಥೆ ಅತ್ಯುತ್ತಮ ಕಾರ್ಯ ನಿರ್ವಹಿಸಲ್ಲಿ ಎಂದು ಶುಭ ಕೋರಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಕಲಾವಿದರಾದ ಡಿಂಗ್ರಿ ನಾಗರಾಜ್ ರವರು ತಂತ್ರಜ್ಞಾನ ದ ಬದಲಾದ ದಿನಮಾನಗಳಲ್ಲಿ ಡೈಲ್ ಆರ್ಟಿಸ್ಟ್ ಸಂಸ್ಥೆ ವಿಶೇಷ ಅಪ್ ನ ಮೂಲಕ ನೂತನ ಪ್ರಯತ್ನಕ್ಕೆ ನಾಂದಿಯಾಗಲಿದ್ದು . ಈ ಮೂಲಕ ಪ್ರತಿಭೆಯುಳ್ಳ ಯುವ ಕಲಾವಿದರು ಸೇರಿದಂತೆ ಹಿರಿಯ ಕಲಾವಿದರಿಗೂ ಸಹ ಅವಕಾಶ ದೊರೆಯುವಂತಾಗಲಿ ಎಂದರು. ಸಮಾರಂಭದಲ್ಲಿ ಉಮೇಶ್ ಬಣಕರ್ ರವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Recent comments