Skip to main content
ಕನಸು ಸೇವಾ ಸಂಸ್ಥೆ ( ರಿ) ಕಲ್ಬುರ್ಗಿ ವತಿಯಿಂದ ಸಸಿ ನಡುವ ಕಾರ್ಯಕ್ರಮ.

ಕನಸು ಸೇವಾ ಸಂಸ್ಥೆ ( ರಿ) ಕಲ್ಬುರ್ಗಿ ವತಿಯಿಂದ ಸಸಿ ನಡುವ ಕಾರ್ಯಕ್ರಮ.

ಕನಸು ಸೇವಾ ಸಂಸ್ಥೆ ( ರಿ) ಕಲ್ಬುರ್ಗಿ ವತಿಯಿಂದ ಸಸಿ ನಡುವ ಕಾರ್ಯಕ್ರಮ.

Kalburgi

ಸಮಾಜಿಕ,ಶಿಕ್ಷಣ,ಪರಿಸರ ವಿವಿಧ ಉದ್ದೇಶಗಳನೊಂದಿ ಕಲರ್ಬುಗಿಯ ನರದಲ್ಲಿ ಸಮಾನಮನಸ್ಕರು ಒಟ್ಟುಗೂಡಿ ಕಟ್ಟಿರುವ ಕನಸು ಸೇವಾ ಸಂಸ್ಥೆ (ರಿ) ಕಲರ್ಬುಗಿಯ ಯುವಕರ ತಂಡ ನರದಲ್ಲಿ ಪರಿಸರ ಕಾಳಜಿ,ಸಮಾಜಿಕವಾಗಿ ಉಯಕ್ತವಾಗುವಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವೂ ಮೈಗೂಡಿಸಿಕೊಂಡಿರುವ ಈ ಸಂಸ್ಥೆ ನಗರದ ಯುವಕರಿಗೆ ಸ್ಫೂರ್ಥಿಯಾಗಿದ್ದಾರೆ.

ಇನ್ನೂ ತಮ್ಮ ಕಾಯಕವನ್ನು ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ ಇದರ ಜೊತೆಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸೇವೆಸಲ್ಲಿಸುತ್ತಿದ್ದಾರಲ್ಲದೆ. ಶೈಕ್ಷಣಿಕವಾಗಿ ವಿದ್ಯಾವಂತರಾಗಿರುವ ಈ ಯುವಕರ ತಂಡ ವಿವಿಧ ಸ್ಪರ್ಧತ್ಮಕ ಪರಿಕ್ಷೇಗಳಿಗೆ ತಯಾರಿನಡೆಸುವ ವಿಧ್ಯಾರ್ಥಿಗಳಿಗೆ ತರಭೇತಿಯನ್ನ ನೀಡಿ ಅದರಲ್ಲಿ ಗಣನಿಯ ಮಟ್ಟದ ಫಲಿತಾಂಶವನ್ನು ಕಂಡುಕೊಳ್ಳುವಲ್ಲಿಯೂ ಯಶ್ವಸಿಯಾಗಿ.

Kalburgi

ಇನ್ನೂ ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಾಗುತ್ತೀರುವ ಅತೀಯಾದ ಪರಿಸರ ವಿನಾಶದಿಂದ ಸಂಭವಿಸುತ್ತಿರುವಂತಹ ಪ್ರಕೃತಿ ವಿಕೋಪದಂತಹ ಅನಹುತಗಳನ್ನು ತಡೆಗಟ್ಟಲು ಪರಿಸರ ಕಾಳಜಿ ಬಗ್ಗೆ ಜಾಗೃತಿ ಮೂಡಿಸಲು ಕನಸು ಸೇವಾ ಸಂಸ್ಥೆ (ರಿ) ಕಲರ್ಬುಗಿ ವತಿಯಿಂದ ನಗರದ ಪೋಲಿಸ್ ಆಯಕ್ತಾಲಯದ ಆವರಣದಲ್ಲಿ ಸಸಿ ನಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿ.ಆರ್.ಎ.ಸಿ.ಪಿ ಶ್ರೀ ಎಮ್.ಡಿ ಸರ್ದಾರ್ ಅವರು ಪ್ರಸ್ತುತ ದಿನಮಾನಗಳಲ್ಲಿ ಹದಿಹರೆಯದ ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದು ಮೋಜು ,ಮಸ್ತಿ ಮಾಡಿ ಕಾಲಹರಣ ಮಾಡುತ್ತಿರುವಂತಹ ಪ್ರಸಂಗಗಳನ್ನು ನೆನೆದು ಯುವಕರ ಬಗ್ಗೆ ಕಳವಳ ವ್ಯಕ್ತಪಡಿಸಿದರು.

Kalburgi

 ಇಂತಹ ಕಾಲದಲ್ಲಿ ಕನಸು ಸೇವಾ ಸಂಸ್ಥೆ (ರಿ )ಯ ಯುವಕರು ಒಳ್ಳೆಯ ಕೆಲಸ ಮಾಡುತ್ತಿದ್ದ ಸಂತೋಷದ ವಿಷಯವಾಗಿದೆ ಜೊತೆಗೆ ಸಮಾಜಕ್ಕೆ ಮಾದರಿಯಾಗುವಂತಹ ಮತ್ತು ಪರಿಸರ ,ಸಮಾಜಿಕ ಮತ್ತು ಶೈಕ್ಷಣಿಕವಾಗಿ ಜಾಗೃತಿ ಮೂಡಿಸುಂತಹ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುವ ಅವಶ್ಯಕತೆ ಇದೆ ಅಂದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಬ್ದಾರಿ ಹಾಗೂ ಕರ್ತವ್ಯ ಕೂಡ ಎಂದು ಪರಿಸರ ಸಂಕ್ಷರಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಆರ್.ಪಿ.ಐ ಶಿವಕುಮಾರ್ ಮದ್ದಾ ,ಮಹಿಳಾ ಪೋಲಿಸ್ ಪೇದೆ ಲಕ್ಷಿ ಹಳ್ಳಿ ಹಾಗೂ ಇತರ ಪೋಲಿಸ್ ಸಿಬ್ಬಂದಿಗಳು ಮತ್ತು ಕನಸು ಸೇವಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.