"ತಾಯ್ತ" ಕಟ್ಟಲು ಸಿದ್ದರಾದ ಲಯಕೋಕಿಲ .
"ತಾಯ್ತ" ಕಟ್ಟಲು ಸಿದ್ದರಾದ ಲಯಕೋಕಿಲ .
!["ತಾಯ್ತ" ಕಟ್ಟಲು ಸಿದ್ದರಾದ ಲಯಕೋಕಿಲ .](/sites/default/files/inline-images/WhatsApp%20Image%202021-07-29%20at%2012.19.28.jpeg)
ಸಂಗೀತ ನಿರ್ದೇಶನ, ನಟನೆಯಿಂದ ನಿರ್ದೇಶನದ ಕಡೆಗೆ.
ನೂತನ ಪ್ರತಿಭೆ ರಿಹಾನ್ ಗೆ ಹರ್ಷಿಕಾ ಪೂಣಚ್ಛ ನಾಯಕಿ. ತಮ್ಮ ನಟನೆಯಿಂದ ಮನೆಮಾತಾಗಿರುವ ಲಯಕೋಕಿಲ, ಸಂಗೀತ ನಿರ್ದೇಶಕರಾಗೂ ಹೆಸರಾದವರು. ಈಗ ಲಯಕೋಕಿಲ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಮೊದಲ ಚಿತ್ರಕ್ಕೆ "ತಾಯ್ತ" ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ರಾಮನಗರದ ದರ್ಗಾವೊಂದರಲ್ಲಿ ಸರಳವಾಗಿ ಆರಂಭವಾಯಿತು. ನಿರ್ಮಾಪಕರ ತಾಯಿ ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿದರು. ಲಯಕೋಕಿಲ ಅವರೆ ಕ್ಲಾಪ್ ಮಾಡುವ ಮೂಲಕ ತಮ್ಮ ನಿರ್ದೇಶನ ಕಾರ್ಯ ಆರಂಭಿಸಿದರು. ಮೊದಲ ದಿನದ ಚಿತ್ರೀಕರಣವನ್ನು ರಾಮನಗರದ ಆಸುಪಾಸಿನಲ್ಲಿ ನಿರ್ದೇಶಕರು ನಡೆಸಿದ್ದಾರೆ .
!["ತಾಯ್ತ" ಕಟ್ಟಲು ಸಿದ್ದರಾದ ಲಯಕೋಕಿಲ .](/sites/default/files/inline-images/WhatsApp%20Image%202021-07-29%20at%2012.19.27%20%282%29.jpeg)
ಆಗಸ್ಟ್ 5 ರಿಂದ ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ನಿರಂತರ ಚಿತ್ರೀಕರಣ ನಡೆಯಲಿದೆ. ಈ ಚಿತ್ರವನ್ನು ಡಾ||ಶಾಹಿದ್ ಅವರು ನಿರ್ಮಿಸುತ್ತಿದ್ದಾರೆ. ಕಥೆಯನ್ನು ಶಾಹಿದ್ ಅವರೆ ಬರೆದಿದ್ದಾರೆ. ಲಯಕೋಕಿಲ ಅವರೆ ಸಂಗೀತ ನೀಡುತ್ತಿರುವ ಈ ಚಿತ್ರದ ಹಾಡುಗಳನ್ನು ರಾಮನಾರಾಯಣ್ ಬರೆದಿದ್ದಾರೆ.
ಆನಂದ್ ಛಾಯಾಗ್ರಹಣ ಹಾಗೂ ಮೋಹನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಿಹಾನ್ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ರಿಹಾನ್ ಅವರಿಗೆ ನಾಯಕಿಯಾಗಿ ಹರ್ಷಿಕಾ ಪೂಣಚ್ಛ ಅಭಿನಯಿಸುತ್ತಿದ್ದಾರೆ.
!["ತಾಯ್ತ" ಕಟ್ಟಲು ಸಿದ್ದರಾದ ಲಯಕೋಕಿಲ .](/sites/default/files/inline-images/WhatsApp%20Image%202021-07-29%20at%2012.19.27%20%281%29.jpeg)
ನಾಯಕನ ತಾಯಿಯ ಪಾತ್ರದಲ್ಲಿ ಸುಮಾಶಾಸ್ತ್ರಿ ಕಾಣಿಸಿಕೊಳ್ಳುತ್ತಿದ್ದಾರೆ. ಲಯಕೋಕಿಲ, ಡಾ||ಶಾಹಿದ್, ಶೋಭ್ ರಾಜ್, ಕಲೀಲ್, ಮಿಮಿಕ್ರಿ ಮಂಜು, ಕಾರ್ತಿಕ್ ಶರ್ಮ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. "ತಾಯ್ತ" ಎಲ್ಲಾ ತರಹದ ಮಾಮೂಲಿ ಕಥೆಯಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಎನ್ನುತ್ತಾರೆ ಲಯಕೋಕಿಲ.
Recent comments