Skip to main content
ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆಯ ಕಿರು ಚಿತ್ರ.

ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆಯ ಕಿರು ಚಿತ್ರ.

ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆಯ ಕಿರು ಚಿತ್ರ.

Kannada new film

ಸಂದೇಶಗಳುಳ್ಳ ಕಿರುಚಿತ್ರಗಳು ಸುದ್ದಿ ಮಾಡುತ್ತಿರುವ ಈ ದಿನಗಳಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ಚಾಲನೆ ನೀಡಿದ “ಇಕ್ಷಣ” ಹೊಸ ಸೇರ್ಪಡೆ. ಚಿಂತನಶೀಲ ವಿಷಯಗಳನ್ನು ಮನರಂಜನೆಯ ಮೂಲಕ ಬೆಳಕಿಗೆ ತರುವ ಉದ್ದೇಶದಿಂದ ಪ್ರಾರಂಭವಾದ ಸುಸ್ಮಿತಾ ಸಮೀರ ಅವರ ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆ ಈಗ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಈ ಕಥೆಯು ಒಂದು ಮನೆಯ ಏಕೈಕ ಪ್ರಾಬಲ್ಯ ಸ್ತಂಭವಾಗಿರುವ ಸಂಪ್ರದಾಯವಾದಿ ತಂದೆ ಮತ್ತು ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಮಗಳು ತನ್ನ ಸ್ಥಾನವನ್ನು ಹುಡುಕಲು ಪ್ರಯತ್ನಿಸುತ್ತಿರುವ ಚರ್ಚೆಯ ಸುತ್ತ ಹೆಣೆಯಲಾಗಿದೆ.

ಈ ಸೂಕ್ಷ್ಮ ಕಥಾವಿಷಯವನ್ನು ಈ ಹಿಂದೆ ಕನ್ನಡ ಚಲನಚಿತ್ರಗಳಲ್ಲಿ ಸಂಭಾಷಣೆಗಾರರಾಗಿ ಕೆಲಸ ಮಾಡಿದ ಪ್ರಸನ್ನ ವಿ.ಎಂ ಬರೆದು ನಿರ್ದೇಶಿಸಿದ್ದಾರೆ; ಚಿತ್ರದಲ್ಲಿ ದಿಯಾ ಖ್ಯಾತಿಯ ಖುಷಿ ರವಿ, ಹಿರಿಯ ನಟರಾದ ಕೆ.ಎಸ್ ಶ್ರೀಧರ್ ಮತ್ತು ಡಾ. ಸೀತಾ ಕೋಟೆ ನಟಿಸಿದ್ದಾರೆ. ಈ ಕಿರುಚಿತ್ರಕ್ಕೆ ಹೆಸರಾಂತ ಛಾಯಾಗ್ರಾಹಕ ಮಹೇಂದರ್ ಸಿಂಹ, ಸಂಕಲನಕಾರ ಶ್ರೀಕಾಂತ್ ಎಸ್‌.ಎಚ್ ಮತ್ತು ಸಂಗೀತಕ್ಕಾಗಿ ಜುಬಿನ್ ಪೌಲ್ ಅವರಂತಹ ತಂತ್ರಜ್ಞರು ಕೆಲಸ ಮಾಡಿದ್ದಾರೆ.

ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆಯ ಕಿರು ಚಿತ್ರ.

ಜೊತೆಯಾಗಿ, ಚಿಕ್ಕಮಗಳೂರಿನ ಜಯಂತಿ ಕಾಫಿ ಈ ಕಿರುಚಿತ್ರಕ್ಕೆ ಪ್ರಾಯೋಜಕತ್ವ ನೀಡಿದೆ. ಸಮಾಜ ನಿರ್ಮಿತ ಅನೇಕ ನಿಯಮಗಳು ಮತ್ತು ಏಕತಾನತೆಗಳಲ್ಲಿ, ಒಂದನ್ನು ಸೂಕ್ಷ್ಮವಾಗಿ ಚರ್ಚಿಸುವ ಉದ್ದೇಶವನ್ನು ಈ ಕಿರುಚಿತ್ರ ಹೊಂದಿದೆ.

ಮನೆಯಲ್ಲಿ ದಿನನಿತ್ಯದ ಒಂದು ಕಪ್ ಕಾಫಿಗಾಗಿ ನಡೆವ ಸಣ್ಣ ವಾದವು ಕೆಲವು ಸೂಕ್ಷ್ಮ ಆಲೋಚನೆಗಳ ವಿನಿಮಯವನ್ನು ಮಾಡಿಕೊಳ್ಳಲು ಮುಂದಾಗುವ ಪ್ರಯತ್ನ ಈ ಕಿರುಚಿತ್ರ ಮಾಡಿದೆ. YouTube ನಲ್ಲಿ Flickering Studios ಅಧಿಕೃತ ಚಾನಲ್‌ನಲ್ಲಿ ನೀವು ಈಗ ಈ ಕಿರುಚಿತ್ರವನ್ನು ವೀಕ್ಷಿಸಬಹುದು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.