ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ವಿಕಾಸ ಪರ್ವ ಜೆಡಿಎಸ್ ಗೆ ಭಾರಿ ಬೆಂಬಲ
ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ವಿಕಾಸ ಪರ್ವ ಜೆಡಿಎಸ್ ಗೆ ಭಾರಿ ಬೆಂಬಲ
ಸಾವಿರಾರು ಕಾರ್ಯಕರ್ತರಿಂದ ನೇಚ್ಚಿನ ನಾಯಕ ಕುಮಾರ ಸ್ವಾಮಿಯವರಿಗೆ ಅದ್ದೂರಿ ಸ್ವಾಗತ
ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯದ ಜೆಡಿಎಸ್ ನ ಮುಂದಿನ ಮಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿಯವರು,ವಿಕಾಸ ಪರ್ವದ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು. ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶತಯಗತಯಾ ಭಾರಿ ಪ್ರಯತ್ನ ನಡೆಸಿದ್ದಾರೆ.ಈಗಾಗಲೆ ಕಳೆದ ತಿಂಗಳು ಕೇಲವು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆಮಾಡಿ, ಭರ್ಜರಿ ಪ್ರಚಾರ ನಡೆಸಿದ್ದಾರೆ.
ಮಾನ್ವಿ ಕ್ಷೇತ್ರದಲ್ಲಿ ತಮ್ಮ ಮುಂದಿನ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರು ಎಂದು ಟಿಕೇಟ್ ಘೋಷಣೆ ಮಾಡಲಾಗಿದೆ.ಸತತ ಎರಡು ದಶಕಗಳಿಂದ ಕಾಂಗ್ರೇಸ್ ಅಡಳಿತ ನಡೆಸುತ್ತಿದ್ದು. ಕಳೆದ ಸಾರಿ ಜೆಡಿಎಸ್ ಕೇಲವೆ ಅಂತರದ ಮತಗಳಿಂದ ಸೋತ್ತಿದ್ದು.ಈ ಬಾರಿ ರಾಜಾ ವೆಂಕಟಪ್ಪ ನಾಯಕ ಅವರನ್ನ ಗೆಲ್ಲಿಸಬೇಕೆಂದು ಕ್ಷೇತ್ರದ ಸಾವಿರಾರು ಮತಾದಾರರು ಕಾರ್ಯಾಕ್ರಮದಲ್ಲಿ ಬಾಗಿಯಾಗುವುದರ ಮೂಲಕ ಬಾರಿಬೆಂಬಲ ನಿಡಿದ್ದಾರೆ.
ಕ್ಷೇತ್ರದ ಅಭ್ಯರ್ಥಿ ರಾಜಾ ವೆಕಂಟಪ್ಪ ನಾಯಕ ಅವರು ಮಾತನಾಡಿ ರೈತರ ಉಳಿವಿಗಾಗಿ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ನಮ್ಮ ನಾಯಕ ಕುಮಾರ ಸ್ವಾಮಿಯವರು ಮಖ್ಯ ಮಂತ್ರಿಯಾಗ ಬೇಕಿದೆ,ಅಲ್ಲದೆ ಕ್ಷೇತ್ರದಲ್ಲಿ ಯಾವ ಅಭಿವೃದ್ದಿ ಕೇಲಸಗಳು ಆಗಿಲ್ಲ ,ಕಳೆದ ಸಾರಿ ನಾನು ಕೇಲವೆ ಅಂತರದ ಮತಗಳಿಂದ ಸೋತ್ತಿದ್ದೆನೆ.ಅದರೆ ಈ ಬಾರಿ ನಿಮ್ಮ ಸೇವೆ ಮಾಡುವುದ್ದಕ್ಕೆ ನನಗೆ ಒಂದು ಅವಕಾಶ ನೀಡಿ ಎಂದು ಮಾತನಾಡಿದರು.ಅಲ್ಲದೆ ಕಾರ್ಯಾಕ್ರಮದಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ಕೇಲವು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಇನ್ನೂ ಕ್ಷೇತ್ರದ ಅಭ್ಯರ್ಥಿಪರ ಪ್ರಚಾರಕ್ಕೆ ಬಂದಿದ್ದ ಕುಮಾರ ಸ್ವಾಮಿಯವರ ಮಾತನ್ನ ಕೇಳಲು ಈ ಭಾಗದ ದೂರದ ಹಳ್ಳಿಗಳಿಂದ ಬಾರಿ ಜನಸಂಖ್ಯೆ ,ವಿಕಾಸ ಪರ್ವದಲ್ಲಿ ಪಾಲ್ಗೋಂಡಿದ್ದರು.ಬಿಸಿಲಿನ ಬೇಗೆ ಎನ್ನದೇ ದಾರಿಉದ್ದಕ್ಕೂ ನೇಚ್ಚಿನ ನಾಯಕನಿಗೆ ಜಯ್ಕಕಾರ ಕೂಗುವುದು ಸಾಮನ್ಯವಾಗಿತ್ತು. ಕ್ಷೇತ್ರದ ಜನರನ್ನ ಉದ್ದೇಶಿಸಿ ಮಾತಾನಾಡಿ, ಒಂದು ಬಾರಿ ನಮ್ಮ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ನಿಮ್ಮ ಬೆಂಬಲ ನೀಡಿ, ಈ ಬಾಗದ ಅಭಿವೃದ್ದಿಗಾಗಿ ಶ್ರಮಿಸುತ್ತೇವೆ ಮುಂದೆ ರೈತರ ಸಂಪೂರ್ಣ ಸಾಲಮನ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
Recent comments