Skip to main content
"ಜಾಡಘಟ್ಟ" ದ ನಂತರ   "ಕವಡೆ" ಆಡಲು ರಘು ಸಿದ್ದ .

"ಜಾಡಘಟ್ಟ" ದ ನಂತರ "ಕವಡೆ" ಆಡಲು ರಘು ಸಿದ್ದ .

"ಜಾಡಘಟ್ಟ" ದ ನಂತರ "ಕವಡೆ" ಆಡಲು ರಘು ಸಿದ್ದ .

"ಜಾಡಘಟ್ಟ" ದ ನಂತರ   "ಕವಡೆ" ಆಡಲು ರಘು ಸಿದ್ದ .

"ಕವಡೆ" ಆಟ ಪುರಾತನ ಆಟ.

ಚದರಂಗ, ಚೌಕಾಬಾರ ಇತ್ಯಾದಿ ಹೆಸರುಗಳಿಂದ ಈ ಆಟ ಪ್ರಸಿದ್ಧಿ. ಇತ್ತೀಚೆಗೆ "ಕವಡೆ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಲಕ್ಷ್ಮೀಕಾಂತ್ ಅವರು ಪ್ರಥಮ ಸನ್ನಿವೇಶಕ್ಕೆ ಆರಂಭಫಲಕ ತೋರಿದರು. ಲಕ್ಷ್ಮೀಪತಿ ಕ್ಯಾಮೆರಾ ಚಾಲನೆ ಮಾಡಿದರು. ಕಳೆದ ತಿಂಗಳು ತೆರೆಕಂಡ "ಜಾಡಘಟ್ಟ" ಚಿತ್ರವನ್ನು ನಿರ್ದೇಶಿಸಿ, ನಟನೆಯನ್ನೂ ಮಾಡಿದ್ದ ರಘು ಎಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜೊತೆಗೆ ನಾಯಕನಾಗೂ ನಟಿಸುತ್ತಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಹೆಸರಾಗಿರುವ ವಿದ್ಯಾ ಈ ಚಿತ್ರದ ನಾಯಕಿ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರತಿಭಾವಂತರು ಪ್ರದರ್ಶನ ನೀಡುತ್ತಿರುತ್ತಾರೆ. ಆದರೆ ಅವರಿಗೆ ಅವಕಾಶ ಸಿಗುವುದು ಕಡಿಮೆ.‌ ನಾವು ಅಂತಹ ಪ್ರತಿಭೆಗೆ ಅವಕಾಶ ನೀಡಲು ನಿಶ್ಚಯಿಸಿ ಈ ಚಿತ್ರಕ್ಕೆ ವಿದ್ಯಾ ಅವರನ್ನು ಆಯ್ಕೆ ಮಾಡಿರುವುದಾಗಿ ರಘು ತಿಳಿಸಿದರು. ನಾಯಕ ಹಾಗೂ ನಾಯಕಿ ನಡುವೆ ಮೂರನೇ ವ್ಯಕ್ತಿಯ ಆಗಮನವಾಗುತ್ತದೆ. ಆಗ ಏನಾಗುತ್ತದೆ? ಎಂಬುದೇ ಕಥಾಹಂದರ.

"ಜಾಡಘಟ್ಟ" ದ ನಂತರ   "ಕವಡೆ" ಆಡಲು ರಘು ಸಿದ್ದ .

ಈ ಜೀವನ ಕೂಡ ಒಂದು ಚದುರಂಗದ ಆಟ. ಹಾಗಾಗಿ ನಮ್ಮ ಚಿತ್ರಕ್ಕೆ "ಕವಡೆ" ಅಂತ ಹೆಸರಿಟ್ಟಿದ್ದೀವಿ ಎನ್ನುತ್ತಾರೆ ರಘು. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. ಶಶಿಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಶಿಮಣಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಈ ಹಿಂದೆ "ಜಾಡಘಟ್ಟ" ಚಿತ್ರ ಕೂಡ ಇವರೇ ನಿರ್ಮಿಸಿದ್ದರು. ಸುಂದರ ಹಾಡುಗಳಿರುವ ಈ ಚಿತ್ರಕ್ಕೆ ಅಭಿಷೇಕ್ ಜಿ ರಾಯ್ ಸಂಗೀತ ನೀಡುತ್ತಿದ್ದಾರೆ. ಪ್ರದೀಪ್ ಜೈನ್ ಛಾಯಾಗ್ರಹಣ ಈ ಚಿತ್ರದ ಛಾಯಾಗ್ರಾಹಕರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.