ಯಾದಗಿರಿಜಿಲ್ಲಾಡಳಿತವಿರುದ್ದಶ್ರೀಶರಣಗೌಡಕಂದಕೂರಅಸಮಾಧನ.
ಯಾದಗಿರಿಜಿಲ್ಲಾಡಳಿತವಿರುದ್ದಶ್ರೀಶರಣಗೌಡಕಂದಕೂರಅಸಮಾಧನ.
ಮಾನ್ಯ ಶರಣಗೌಡ ಕಂದಕೂರ ರವರು ಇಂದು ಮಾನ್ಯ ಶಾಸಕರ ಜನ ಸಂಪರ್ಕ ಕಛೇರಿ ಯಾದಗಿರಿಯಲ್ಲಿ ಪ್ರೇಸ್ ಮೀಟ ಕರೆದು ಶಾಸಕರನ್ನು ಕತ್ತಲ್ಲಲ್ಲಿ ಇಟ್ಟ, ಯಾದಗಿರಿ ಜಿಲ್ಲಾಡಳಿತ ವಿರುದ್ಧ ಶರಣಗೌಡ ಕಂದಕೂರ್ ರವರಿಂದ ಅಸಮಾಧಾನ. ಕಾಲಕಾಲಕ್ಕೆ ಜಿಲ್ಲೆಯ 4-ಜನ ಶಾಸಕರನ್ನು ಕರೆದು ಸಭೆ ನಡೆಸಿ ಕರೋನದ ಬಗ್ಗೆ ಪೂರ್ಣ ಮಾಹಿತಿ ನೀಡಿರುವುದಿಲ್ಲ, ಕ್ವಾರಂಟೈನ್ ನಲ್ಲಿ ನಡೆದ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿರುವುದಿಲ್ಲಾ, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ವಲಸಿಗರು ಬರುತ್ತಿರುವುದರಿಂದ ಸೊಂಕಿತರ ಸಂಖ್ಯೆ ಹೆಚ್ಚಾಗುವ ನೀರಿಕ್ಷೆ ಇದ್ದು, ಮುಂಜಾಗೃತ ಕ್ರಮವಾಗಿ ತೆಗೆದುಕೊಂಡು ನಿರ್ಧಾರಗಳ ಬಗ್ಗೆ ಶಾಸಕರಿಗೆ ತಿಳಿಸಿರುವುದಿಲ್ಲಾ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಅನುದಾನಗಳ ಬಗ್ಗೆ ಮತ್ತು ಸಾಧನೆಗಳ ಬಗ್ಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ.
ವಲಸಿಗರ ಗಂಟಲು ದ್ರವ ಪರೀಕ್ಷೆಗಾಗಿ ಪಡೆದು, ವರದಿ ಬರುವ ಪೂರ್ವದಲ್ಲಿಯೇ ಬಿಡುಗಡೆ ಮಾಡಿರುವವರ ಪೈಕಿ 18 ಜನರಿಗೆ ಪಾಜಿಟೀವ್ ಬಂದಿರುತ್ತದೆ. ಇದರ ಹೊಣೆಗಾರರು ಯಾರು ಎಂದು ಪ್ರಶ್ನೆ ಮಾಡಿದರು. ಹಾಗೂ ಜಿಲ್ಲಾಡಳಿತದ ಬೇಜವಬ್ದಾರಿಗೆ ಇದೇ ಉದಾಹರಣೆಯಾಗಿದೆಂದು ಅಸಮಾಧಾನ ವ್ಯಕ್ತಪಡಿಸಿದರು.
Recent comments