Skip to main content
ಕೊರೋನಾ ಜಾಗೃತಿ ಮೂಡಿಸಿದ ಕೃಷ್ಣ ಹಾಗೂ ರಾಧೆ ವೇಷದಾರಿ ಪುಟಾಣಿ ಮಕ್ಕಳು .

ಕೊರೋನಾ ಜಾಗೃತಿ ಮೂಡಿಸಿದ ಕೃಷ್ಣ ಹಾಗೂ ರಾಧೆ ವೇಷದಾರಿ ಪುಟಾಣಿ ಮಕ್ಕಳು .

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಸ್ಪರ್ಧೆ: ವಿನೂತನ ವೇಷ ಧರಿಸಿ ಕೊರೊನಾ ಜಾಗೃತಿ ಮೂಡಿಸಿದ ಟ್ವಿಂಕಲ್ ಬೆಲ್ ಶಾಲಾ ಮಕ್ಕಳು

Yadgir

ಯಾದಗಿರಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುಟ್ಟ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸುವುದನ್ನು ನೀವು ನೋಡಿರ್ತೀರಿ. ಆದರೆ ಯಾದಗಿರಿಯ ಟ್ವಿಂಕಲ್ ಬೆಲ್ ಹಾಗೂ ಇಂಡಿಯನ್ ಪಬ್ಲಿಕ್ ಸ್ಕೂಲ್ ಮಕ್ಕಳು ವಿನೂತನವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಾಕ್ಷಿಯಾಗಿದ್ದು, ಜೊತೆಗೆ ಕೊರೊನಾ ಜಾಗೃತಿಯೊಂದಿಗೆ ಕೊರೊನಾ ವಾರಿಯರ್ ಆಗಿ ವೇಷ ಧರಿಸಿ ಗಮನ ಸೆಳೆದಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತವಾಗಿ ಶಾಲೆಯ ಅಧ್ಯಕ್ಷರಾದ ವೆಂಕಟರೆಡ್ಡಿ ಪಾಟೀಲ್ ಕುರಿಹಾಳ ಹಾಗೂ ಕಲ್ಯಾಣಿ ಪಾಟೀಲ್ ಅವರು ಆನ್ ಲೈನ್ ಮುಖಾಂತರ ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆಯನ್ನು ಏರ್ಪಡಿಸಿದ್ದರು.

Yadgir

ಶ್ರೀ ಕೃಷ್ಣ ರಾಧೆಯ ಜೊತೆಗೆ ಕೊರೊನಾ ವಾರಿಯರ್ ಗಳಾದ ವೈದ್ಯರು, ಪೊಲೀಸರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ನಾನಾ ರೀತಿಯ ವೇಷ ಧರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಮಕ್ಕಳು ವೇಷ ಧರಿಸಿ, ಆನ್ ಲೈನ್ ನಲ್ಲಿ ಸ್ಪರ್ಧೆಯಲ್ಲಿ ಭಾಗಿಯಾದರು.

Yadgir

ಕೃಷ್ಣ ರಾಧೆಯ ವೇಷದಲ್ಲಿ ಮಕ್ಕಳು ಮಾಸ್ಕ್ ಹಾಕಿಕೊಂಡು, ಕೈಯಲ್ಲಿ ಸ್ಯಾನಿಟೈಸರ್ ಹಿಡಿದು ಕೊರೊನಾ ಜಾಗೃತಿ ಮೂಡಿಸಿದ್ದಾರೆ. ಹಾಗೂ ಕೊರೊನಾ ವೈರಸ್ ರೀತಿಯಲ್ಲಿ, ಆ್ಯಂಬುಲೆನ್ಸ್ ಚಾಲಕ, ರೋಗಿಗಳ ರೀತಿ ಹಾಗೂ ಚಿಕಿತ್ಸೆ ಕೊಡುವ ಡಾಕ್ಟರ್ ರೀತಿ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಟ್ವಿಂಕಲ್ ಶಾಲೆಯು ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಾಕ್ಷಿಯಾಯಿತು.

ಕೊರೊನಾ ಸಮಯದಲ್ಲಿ ಮಕ್ಕಳಿಗೆ ಉತ್ಸಾಹ ತುಂಬಿ ಶಾಲೆಯ ಆಡಳಿತ ಮಂಡಳಿ ಈ ರೀತಿಯಲ್ಲಿ ಸ್ಪರ್ಧೆ ಏರ್ಪಡಿಸಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ...

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.