ನಾನು ರೈತ ಬ್ರದರ್ .! ಹೆಚ್ಕೆ.ಡಿ .ಕೆ ಟ್ರಾಕ್ಟರ್ ಡ್ರೈವಿಂಗ್ .
ಟ್ರಾಕ್ಟರ್ ಸ್ಟೇರಿಂಗ್ ಹಿಡಿದ ಮಾಜಿ ಸಿ ಎಂ ಹೆಚ್. ಡಿ .ಕೆ .
ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸುಣ್ಣ ಘಟ್ಟ ಗ್ರಾಮದಲ್ಲಿ ಟ್ರಾಕ್ಟರ್ ಸ್ಟೇರಿಂಗ್ ಹಿಡಿದು ಮಾಜಿ ಸಿಎಂ ಟ್ರಾಕ್ಟರ್ ಚಾಲನೆ ಮಾಡಿದ ಕುಮಾರಸ್ವಾಮಿಯವರ ದೃಶ್ಯ ರೈತರ ಮೇಲಿನ ಕಾಳಜಿಯ ಭಾವನೆ ಎತ್ತಿ ತೋರಿಸಿದೆ .ಇಂದು ಸುಣ್ಣ ಘಟ್ಟ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಲಾಗಿದ್ದ ಯಂತ್ರದಾರೆ ಕಾರ್ಯಕ್ರಮದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರವನ್ನು ಕುಮಾರಸ್ವಾಮಿಯವರು ಉದ್ಘಾಟನೆ ಮಾಡಿ ಸ್ವತಃ ಅವರೆ ಚಾಲನೆ ಟ್ರಾಕ್ಟರ್ ಚಾಲನೆ ಮಾಡಿದ್ರು
ಇನ್ನೂ ಕುಮಾರ ಸ್ವಾಮಿ ಯವರು ಮಾತನಾಡುತ್ತ *ನಾನು ರೈತ ಬ್ರದರ್* ಈ ಹಿಂದೆ ಹೊಲ ಉಳುವೆ ಮಾಡುತ್ತಿದೆ ಇತ್ತೀಚೆಗೆ ಮರೆತಿದ್ದೇನೆ ಅಷ್ಟೆ ಎನ್ನುತ್ತಾ ಟ್ರಾಕ್ಟರ್ ಚಾಲನೆ ಮಾಡಿದ ಹೆಚ್.ಡಿ.ಕೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಟ್ರಾಕ್ಟರ್ ಚಾಲನೆ ಮಾಡಿದರು .
ಕುಮಾರಸ್ವಾಮಿಯವರು ಚನ್ನಪಟ್ಟಣ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿರುವ ಯಂತ್ರದಾರೆ ಕಾರ್ಯಕ್ರಮದಲ್ಲಿ ಹೆಚ್ .ಡಿ.ಕುಮಾರಸ್ವಾಮಿರವರು ಟ್ರಾಕ್ಟರ್ ಓಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯುವ ಜೆಡಿಎಸ್ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ,ಪಕ್ಷದ ಅಧ್ಯಕ್ಷರುಗಳು ಪದಾಧಿಕಾರಿಗಳು,ಮುಖಂಡರುಗಳು ಉಪಸ್ಥಿತರಿದ್ದರು.
Recent comments