ಮೇರಿ ಕೋಮ್ ಗೆ ಪದ್ಮ ವಿಭೂಷಣ ,ಸಿಂಧೂಗೆ ಪದ್ಮ ಭೂಷಣ ಪ್ರಶಸ್ತಿ
ಮೇರಿ ಕೋಮ್ಗೆ ಪದ್ಮ ವಿಭೂಷಣ, ಸಿಂಧೂಗೆ ಪದ್ಮ ಭೂಷಣ ಪ್ರಶಸ್ತಿ
ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಗೆ ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್ ಭಾಜನರಾಗಿದ್ದಾಾರೆ. ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಅವರು ಪದ್ಮ ಭೂಷಣ ಗೌರವಕ್ಕೆೆ ಪಾತ್ರರಾಗಿದ್ದಾರೆ. ನಾಳೆ ನಡೆಯುವ ಗಣರಾಜ್ಯೋತ್ಸವ ಅಂಗವಾಗಿ ಭಾರತ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಗಳನ್ನು ಘೋಷಿಸಿದೆ.
ಕ್ರೀಡಾ ಕ್ಷೇತ್ರದಿಂದ ಮೇರಿ ಕೋಮ್ ಹಾಗೂ ಪಿ.ವಿ ಸಿಂಧೂ ಸೇರಿದಂತೆ ಇನ್ನಿತರ ಆರು ಮಂದಿ ಕ್ರೀಡಾಪಟುಗಳು ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 36ರ ಪ್ರಾಯದ ಮೇರಿ ಕೋಮ್ ಅವರು ರಾಜ್ಯ ಸಭೆಯ ಸದಸ್ಯರೂ ಆಗಿದ್ದು, 2012 ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದರು. ಜತೆಗೆ, ತಮ್ಮ ವೃತ್ತಿ ಜೀವನದಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. 24ರ ಪ್ರಾಾಯದ ಪಿ.ವಿ ಸಿಂಧು 2016ರ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು.
ಬ್ಯಾಡ್ಮಿಂಟನ್ ನಲ್ಲಿ ವಿಶ್ವ ಚಾಂಪಿಯನ್ಶಿಪ್ ಗೆದ್ದ ಭಾರತದ ಏಕೈಕ ಆಟಗಾರ್ತಿ ಎಂಬ ಸಾಧನೆಗೆ ಸಿಂಧು ಕಳೆದ ವರ್ಷ ಆಗಸ್ಟ್ನಲ್ಲಿ ಭಾಜನರಾಗಿದ್ದರು.
ಇವರಿಬ್ಬರ ಜತೆ ಆರು ಮಂದಿ ಕ್ರೀಡಾಪಟುಗಳು ಪದ್ಮಶ್ರೀ ಪಶಸ್ತಿಗೆ ಭಾಜನರಾಗಿದ್ದಾರೆ. ಭಾರತ ತಂಡದ ಮಾಜಿ ವೇಗಿ ಝಹೀರ್ ಖಾನ್, ಭಾರತ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್, ಭಾರತ ಹಾಕಿ ತಂಡದ ಮಾಜಿ ಆಟಗಾರ ಎಂ.ಪಿ ಗಣೇಶ್, ಶೂಟರ್ ಜಿತು ರೈ, ಭಾರತ ಫುಟ್ಬಾಲ್ ಮಹಿಳಾ ತಂಡದ ಮಾಜಿ ನಾಯಕಿ ಬೆಂಬೆಮ್ ದೇವಿ ಹಾಗೂ ಆರ್ಚರಿ ಪಟು ತರುಣ್ದೀಪ್ ಸಿಂಗ್ ಅವರು ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
Recent comments