ಎಚ್ ಎಮ್ ರಮೇಶ್ ಗೌಡ ಇವರಿಂದ ಬಡವರಿಗೆ ಕಿಟ್ ವಿತರಣೆ .
ಎಚ್ ಎಮ್ ರಮೇಶ್ ಗೌಡ ಇವರಿಂದ ಬಡವರಿಗೆ ಕಿಟ್ ವಿತರಣೆ .
ಬೆಂಗಳೂರು :ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಅಕ್ಷಯ ತೃತೀಯ ಮತ್ತು ಕಾಯಕಯೋಗಿ ಬಸವಣ್ಣನವರ ಜಯಂತಿಯ ದಿನವಾದ ಇಂದು ಆಹಾರಧಾನ್ಯಗಳ 1000 ಕಿಟ್ ಗಳನ್ನು ಎಚ್ ಎಂ ರಮೇಶ್ ಗೌಡ ವಿಧಾನ ಪರಿಷತ್ ಸದ್ಯಸ್ಯರು ಇವರಿಂದ ಕಿಟ್ ವಿತರಿಸಲಾಯಿತು.
ಸದ್ಯ ಇಡೀ ವಿಶ್ವವೇ ಕಷ್ಟದಲ್ಲಿದೆ ಹೀಗಾಗಿ, ಎಲ್ಲರನ್ನೂ ಸಮಾನವಾಗಿ ಕಾಣುತ್ತಾ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ, ಹಸಿದವರಿಗೆ ಊಟ ನೀಡುತ್ತಾ ಎಲ್ಲರೂ ಬಸವ ಜಯಂತಿಯನ್ನು ಆಚರಿಸೋಣ ಈ ನಿಟ್ಟಿನಲ್ಲಿ ನಮ್ಮದೊಂದು ಈ ಪುಟ್ಟ ಸಹಾಯದ ಪ್ರಯತ್ನಕ್ಕೆ,ನಿಮ್ಮ ಪ್ರೀತಿ ಆಶೀರ್ವಾದ ನಮ್ಮ ಮೇಲಿರಲಿ ಎಂದರು. ನಮ್ಮ ನಾಡು ಕಂಡ ಅಪ್ರತಿಮ ಕಾಯಕಯೋಗಿ ಬಸವಣ್ಣನವರ ಜಯಂತ್ಯೋತ್ಸವ ನಾಡಿಗೆ ಸುಖವನ್ನುತರಲಿ ದೇಶದಲ್ಲಿ ನೆಮ್ಮದಿ ಮನೆ ಮಾಡಲಿ.ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಮಾನವೀಯತೆಯ ಸಾರಿದ ಜಗಜ್ಯೋತಿ ಬಸವೇಶ್ವರ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದರು.
Recent comments