Skip to main content
ಆಲ್ಕೋಡ್ ನಡೆ......ಕಾಂಗ್ರೆಸ್ ಕಡೆ.......

​ ​ಆಲ್ಕೋಡ್ ನಡೆ......ಕಾಂಗ್ರೆಸ್ ಕಡೆ.......

​ ​ಆಲ್ಕೋಡ್ ನಡೆ......ಕಾಂಗ್ರೆಸ್ ಕಡೆ.......

ಜೆಡಿಎಸ್ ನ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಆಗಿದ್ದ ಹನುಮಂತಪ್ಪ ಆಲ್ಕೋಡ್ ತೆನೆ ಬಿಟ್ಟು ,ಕೈ ಹಿಡಿದಿದ್ದಾರೆ.ಎರಡು ದಶಕಗಳಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ನಿಂದ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದ ಇವರು ಪಕ್ಷದ ಪ್ರಮುಖ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದರು.ಅಲ್ಲದೆ ಜೆಡಿಎಸ್ ಪಕ್ಷದಿಂದ ಎಂಎಲ್ಸಿಯಾಗಿ ಮತ್ತು ಕುಮಾರ ಸ್ವಾಮಿಯವರ ಸಮ್ಮಿಶ್ರ ಸರ್ಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡೆ ಸಚಿವರಾಗಿ ಸೇವೆಮಾಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಅಲ್ಲದೇ ಪಕ್ಷದಿಂದ ತಮಗೆ ಟಿಕೇಟ್ ಕೈ ತಪ್ಪಿದ ಕಾರಣಕ್ಕಾಗಿ ಪಕ್ಷ ಬಿಟ್ಟಿದ್ದಾರೆ.

ಮುಖ್ಯಮಂತ್ರಿ ನೀಡಿದ ಭರವಸೆ ಮೇರೆಗೆ ಪಕ್ಷ ಸೇರ್ಪಡೆಯಾಗಿದ್ದಾರೆ.

ಪಕ್ಷ ಬಿಡಲು ಕಾರಣ.?

ಜೆಡಿಎಸ್ ಪಕ್ಷದ ಆಪ್ತ ,ದಲಿತ ಪ್ರಭಾವಿ ನಾಯಕರೆಂದು ಗುರುತಿಸಿ ಕೊಂಡಿದ್ದ ಇವರು ದೇವದುರ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ರಾಜೀಕಿಯ ಮಾಡಿದ್ದರು. ಆದರೆ ದೇವದುರ್ಗ ಕಳೆದ ವಿಧಾನ ಸಭೆಯಿಂದ ಎಸ್ಟಿ ಮೀಸಲು ಕ್ಷೇತ್ರವಾದ ಹಿನ್ನೆಲೆ ಈ ಕ್ಷೇತ್ರವನ್ನು ಬಿಟ್ಟುಕೊಡಲೇ ಬೇಕಾಯಿತು.ಆದರೆ ಲಿಂಗಸುಗೂರು ಎಸ್ಸಿ ಕ್ರೇತ್ರವಾಗಿದ್ದ ಬೆನ್ನಲ್ಲೇ ಈ ಕ್ಷೇತ್ರದಿಂದ ವಿಧಾನ ಸಭಾ ಚುನಾವಣಾ ಕಣಕ್ಕೆ ಇಳಿಯಲು ತಯಾರಿನಡೆಸಿದ್ದರು, ಆದರೆ ಇದ್ದಕ್ಕಿದಂತೆ ಜೆಡಿಎಸ್ ಪಕ್ಷದಿಂದ ಇವರಿಗೆ ಟಿಕೇಟ್ ಕೊಡದೆ ಸಿದ್ದುಬಂಡಿಗೆ ಟಿಕೇಟ್ ನೀಡಿದ್ದಾರೆ ಅಲ್ಲದೆ ಟಿಕೇಟ್ ಹಂಚಿಕೆಯಲ್ಲಿ ತಮ್ಮನ್ನ ಕಡೆಗಣಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಪಕ್ಷ ಬದಲಾವಣೆ ಮಾಡಿದ್ದೇನೆ ಎಂದು ಹೇಳುತ್ತಾರೆ.

ಮುಖ್ಯಮಂತ್ರಿ ನೀಡಿದ ಭರವಸೆ ಮೇರೆಗೆ ಪಕ್ಷ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ ಸೇರ್ಪಡೆಯಿಂದ ಲಾಭಗಳು.

ಈ ಎಲ್ಲಾ ಕಾರಣಗಳಿಂದಾಗಿ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಅಧಿಕೃತವಾಗಿ ಕೋಲಾರದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡಿದ್ದಾರೆ. ಮುಖ್ಯ ಮಂತ್ರಿ ಸಿಧ್ದರಾಮಯ್ಯ ಮತ್ತು ಕೆ.ಎಚ್. ಮುನಿಯಪ್ಪ. ಎಚ್.ಆಂಜನೇಯ ಮತ್ತು ಎಲ್.ಹನುಮಂತಯ್ಯ ಅವರ ಜೊತೆ ನಡೆದ ಮಾತುಕತೆಯ ಫಲಕಾರಿಯಿಂದಾಗಿ ಕಾಂಗ್ರೆಸ್ ಸೇರ್ಪಡೆ ಗೊಂಡಿದ್ದಾರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ಥಾನಮಾನ ನೀಡುವುದಾಗಿ ಮುಖ್ಯಮಂತ್ರಿ ನೀಡಿದ ಭರವಸೆ ಮೇರೆಗೆ ಪಕ್ಷ ಸೇರ್ಪಡೆಯಾಗಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.