ಕೊರೋನಾ ವಿರುದ್ದ ಹೋರಾಡಿದ ರಾಯಚೂರು ವೈದ್ಯಧಿಕಾರಿಗಳಿಗೆ ಆರತಿ ಬೆಳಗಿ ಸನ್ಮಾನ.
ಕೊರೋನಾ ವಿರುದ್ದ ಹೋರಾಡಿದ ರಾಯಚೂರು ವೈದ್ಯಧಿಕಾರಿಗಳಿಗೆ ಆರತಿ ಬೆಳಗಿ ಸನ್ಮಾನ.
ರಾಯಚೂರು: ರಾಯಚೂರಿನ ಹೇಸರಾಂತ ಕಲಾ ಸಂಕುಲಾ ಸಂಸ್ಥೆ (ರಿ).ಇವರ ವತಿಯಿಂದ ಜಿಲ್ಲೆಯಲ್ಲಿ ಒಂದಲ್ಲ ಒಂದು ವಿಶೇಷ ಸ್ಪೂರ್ತಿಧಾಯಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಇನ್ನೂ ಜಿಲ್ಲೆಯಲ್ಲಿ ಕಳೆದ ತಿಂಗಳುಗಳಿಂದ ಕೊರೋನಾ ಭಿತಿಯಿ ಲಾಕ್ ಡೌನ್ ಸಮಸ್ಸೆಯಿಂದ ಕಂಗಾಲಾಗಿದ್ದ ಬಡ ಕಾರ್ಮಿಕರಿಗೆ ಊಟದ ವ್ಯವಸ್ಥೆ ,ಇನ್ನೀತರ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಸಿಕೊಂಡಿರುವ ಸಂಸ್ಥೆ ಕಳೆದ ದಿನದಗಳ ಹಿಂದೇ ಕೊರೋನಾ ತಡೆಗಟ್ಟುವಲ್ಲಿ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ಪಟ್ಟ ಪರಿಶ್ರಮಕ್ಕೆ ಪ್ರತಿಫಲವಾಗಿ ಜಿಲ್ಲೆಯ ಪೋಲಿಸ್ ಅಧಿಕಾರಿಗಳಿಗೆ ಅರತಿ ಬೆಳಗಿ ಸನ್ಮಾನ ಮಾಡಿದ್ದರು.
ಅದೇರೀತಿಯಾಗಿ ಇಂದು ಕಲಾ ಸಂಕುಲಾ ಸಂಸ್ಥೆವತಿಯಿಂದ ರಿಮ್ಸ್ ಅಸ್ಪತ್ರೆಯ ವ್ಯೆದ್ಯರು,ನರ್ಸ್,ಅಂಬುಲೆನ್ಸ್ ಚಾಲಕರು ಇವರು , ಕೊರೋನಾ ಪಾಸೀಟಿವ್ ಕೇಸ್ ಬಾರದಂತೆ ತಮ್ಮ ಜೀವವನ್ನೇ ಪಣಕಿಟ್ಟು ಹಗಲಿರುಳು ಸೇವೆಮಾಡಿದಂತಹ ವೈದ್ಯಲೋಕದ ಸೈನಿಕರಾದ ಇವರಿಗೆ ಅರತಿ ಬೆಳಗಿ ಸನ್ಮಾನ ಮಾಡಲಾಯಿತು. ಇನ್ನೂ ಹತ್ತು ಹಲಾವಾರು ಸಾಮಾಜಿಕ ಚಟುವಟಿಕೆಗಳ ಮಾಡುವ ಮೂಲಕ ಹೇಸರು ವಾಸಿಯಾಗಿದ್ದಾರೆ.
ಕಾರ್ಯಕ್ರವ ಉದ್ದೇಶೆಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮತಿ ರೇಖಾ ಬಡಿಗೇರ್ ಕಳೆದ ವಾರ ನಗರದಲ್ಲಿ ಪೋಲಿಸ್ ಇಲಾಖೆಯವರಿಗೆ ಸನ್ಮಾನಿಸಿದ್ದೆವು. ಈ ದಿನ ಆರೋಗ್ಯ ಇಲಾಖೆಯವರಿಗೆ ಗೌರವ ಸನ್ಮಾನ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು ಎಂದರು. ಸಂಸ್ಥೆಯ ಉಪಾದ್ಯಕ್ಷರಾದ ಶ್ರೀ ಮತಿ ವಿಜಯಲಕ್ಷ್ಮಿ ಆರ್.ಶಿನಾಳೆ,ಕಾರ್ಯದರ್ಶಿ ಮಾರುತಿ ಬಡಿಗೇರ್, ಇದ್ದರು. ಡಾ || ಬಸವರಾಜ್ ಪೀರಾಪುರ ನಿರ್ದೇಶಕರು ರಿಮ್ಸ್,ಡಾ|| ಇಂದರ್ ರಾಜ್ ಇಟಗಿ,ಡಾ|| ಬಸವರಾಜ್ ಪಾಟೀಲ್,ಡಾ|| ಅರುಣ್ ಮೂರ್ತಿ ಡಾ|| ಬಾಸ್ಕರ್ ಡಾ|| ಎನ್.ವಿಜಯ ಶಂಕರ್.ಡಾ|| ವಾಸುದೇವ್ ಜಹಗೀರಾದಾರ,ರಾಜೆಂದ್ರಕುಮಾರ ಶಿಮಾಳೆ ನಾಮ ನಿರ್ದೇಶಕ ಸದಸ್ಯರು,ರಿಮ್ಸ್,ದಂಡಪ್ಪ ಬಿರದಾರ,ವೇಣುಗೋಪಾಲ,ಈರೇಶಅಮೀತ್ ದಂಡಿನ್, ದಿನೇಶ್ ದಸ್ತದಾರ್, ಶರಣು ಬಲ್ಲಟಗಿ ಇನ್ನೀತರರಿದ್ದರು.
Recent comments