ನಟಿ ಸಿಂಧು ಮೆನನ್ ವಿರುದ್ದ ಎಫ್.ಐ.ಅರ್ ದಾಖಲು.
ನಟಿ ಸಿಂಧು ಮೆನನ್ ವಿರುದ್ದ ಎಫ್.ಐ.ಅರ್ ದಾಖಲು.
ಬಹು ಭಾಷ ನಟಿ ಸಿಂಧು ಮೆನನ್ ವಿರುದ್ದ ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.ಬರೋಡ ಬ್ಯಾಂಕಿಗೆ ವಂಚನೆ ಮಾಡಿರುವ ಆರೋಪದಲ್ಲಿ ಸಿಂಧು ಮೆನನ್ ಸಹೋದರ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.ನಕಲಿ ದಾಖಲೆಗಳನ್ನ ಸೃಷ್ಟಿಸಿ ಬ್ಯಾಂಕಿನಿಂದ ಸುಮಾರು 36 ಲಕ್ಷ ರೂಪಾಯಿ ಸಾಲ ಪಡೆದು ಬ್ಯಾಂಕಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪದಡಿ ಎಫ್.ಐ.ಆರ್ ದಾಖಲಾಗಿದೆ.
ಈಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೆ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕೇಯನ್ ವರ್ಮಾ, ನಾಗಶ್ರೀ ಶಿವಣ್ಣ ಅವರನ್ನ ಬಂಧಿಸಲಾಗಿದೆ.ಪ್ರಕರಣದ ಮೂರನೇ ಆರೋಪಿ ಸಿಂಧು ಮೆನನ್ ಅವರಿಗಾಗಿ ಹುಡುಕಾಟ ನಡೆಸಲಾಗಿದೆ.
ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ರಮೇಶ್ ಆವರು ಜನವರಿ 10 ರಂದು ನೀಡಿದ್ದ ದೂರಿನ ಅನ್ವಯ ಎಫ್.ಐ.ಆರ್ ದಾಖಲಾಗಿದ್ದು,ಸಿಂಧು ಮೆನನ್ ಸಹೋದರ ಬ್ಯಾಂಕಿನಿಂದ ಸಾಲ ಪಡೆದಿದ್ದರು ಎನ್ನಲಾಗಿದೆ.ಈ ಹಣವನ್ನ ಸಿಂಧು ಮೆನನ್ ಕೂಡ ಬಳಸಿಕೊಂಡಿರುವ ದಾಖಲೆಗಳಿದ್ದು,ಅವರ ಮೇಲೂ ಎಫ್.ಐ.ಆರ್ ರಿಜಿಸ್ಟಾರ್ ಆಗಿದೆ.
ಸದ್ಯ ಸಿಂಧು ಮೆನನ್ ಅಮೇರಿಕಾದಲ್ಲಿದ್ದಾರೆ. ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆಯಂತೆ,ಈ ಬಗ್ಗೆ ಖಚಿತ ಪಡಿಸಿರುವ ಉತ್ತರ ವಲಯದ ಡಿಸಿಪಿ ಚೇತನ್ ಸಿಂಗ್ ರಾಥೋಡ್” ಈ ಪ್ರಕರಣದಲ್ಲಿ ಇಬ್ಬರನ್ನ ಬಂಧಿಸಲಾಗಿದೆ.ಸಿಂಧು ಮೆನನ್ ಪರೋಕ್ಷವಾಗಿ ಇದಕ್ಕೆ ಸಹಕರಿಸಿರಬಹುದು.ಅವರನ್ನ ಕರೆಸಿ ವಿಚಾರಣೆ ನಡೆಸಲಾಗುತ್ತೆ.ಆರೋಪ ಸಾಬೀತಾದ್ರೆ ಬಂಧಿಸಲಾಗುತ್ತೆ” ಎಂದಿದ್ದಾರೆ.
Recent comments