ಅಕಾಲಿಕ ಮಳೆ ಬೆಳೆ ಹಾನಿ ರೈತರಿಗೆ ಪರಿಹಾರ ನೀಡಲು ಸುಭಾಷ್ ಐಕೂರು ಆಗ್ರಹ
ಯಾದಗಿಯಲ್ಲಿ ಅಕಾಲಿಕ ಮಳೆಗೆ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡಲು ಸುಭಾಷ್ ಐಕೂರು ಆಗ್ರಹ.
ಯಾದಗಿರಿ: ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಭತ್ತ ಹಾಗೂ ಜೋಳ ನೆಲಸಮವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ರೈತರಿಗೆ ಜಿಲ್ಲಾಡಳಿತ ಸೂಕ್ತವಾದ ಪರಿಹಾರ ಒದಗಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಸುಭಾಷ್ ಐಕೂರು ಆಗ್ರಹಿಸಿದ್ದಾರೆ. ಜಿಲ್ಲೆಯ ವಡಗೇರಾ ತಾಲೂಕಿನ ಗೊಂದೇನೂರು, ಕುರಿಹಾಳ ಹಾಗೂ ಅನಕಸೂಗುರು ಸುತ್ತ ಮುತ್ತ ಆಲೆಕಲ್ಲು ಸಹಿತ ಮಳೆಯಾಗಿದ್ದು, ಭತ್ತ ಹಾಗೂ ಜೋಳ ನೆಲ ಕಚ್ಚಿವೆ. ಈಗಾಗಲೇ ಕೊರೊನಾ ವೈರಸ್ ಹಾವಳಿಯಿಂದ ರೈತರು ಸಂಕಷ್ಟದಲ್ಲಿದ್ದು, ಈ ಅಕಾಲಿಕ ಮಳೆಯಿಂದ ಬೆಳೆಯಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಈ ಕುರಿತು ಸರ್ವೇ ಮಾಡಿ ರೈತರಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.....
Recent comments