Skip to main content
ವೈದ್ಯ ಶ್ರೀ ಡಾ.ಅಜ್ಮಿರ್ ಪಾಷ ಅವರಿಂದ ಕಾರ್ಯನಿರತ ಅಧಿಕಾರಿಗಳಿಗೆ ಆಹಾರ ವಿತರಣೆ.

ವೈದ್ಯ ಶ್ರೀ ಡಾ.ಅಜ್ಮಿರ್ ಪಾಷ ಅವರಿಂದ ಕಾರ್ಯನಿರತ ಅಧಿಕಾರಿಗಳಿಗೆ ಆಹಾರ ವಿತರಣೆ.

ವೈದ್ಯ ಶ್ರೀ ಡಾ.ಅಜ್ಮಿರ್ ಪಾಷ ಅವರಿಂದ ಕಾರ್ಯನಿರತ ಅಧಿಕಾರಿಗಳಿಗೆ ಆಹಾರ ವಿತರಣೆ.

sirwar

ಸಿರವಾರ: “ಕೊವೀಡ್-19” ಕೊರೋನಾ ರೋಗವನ್ನು ತಡೆಗಟ್ಟಲು ಹಮ್ಮಿಕೊಂಡಿರುವ ಈ“ಲಾಕ್ ಡೌನ್,” ಕಾರ್ಯದಲ್ಲಿ ತೊಡಗಿದ ವಿವಿಧ ಇಲಾಖೆಯ ನಾನಾ ಅಧಿಕಾರಿಗಳು,ತಮ್ಮ ತಮ್ಮ ಕುಟುಂಬ, ನಿದ್ದೆ ,ಊಟ ಎಲ್ಲವನ್ನು ಮರೆತು ಜನರ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವ ಇಂತಹ ಅಧಿಕಾರಿಗಳಿಗೆ ಅಲ್ಲದೇ ನಿರರ್ಗತಿಕರಿಗೆ ಸಿರವಾರದ ಗುಡ್ ಮಾರ್ನಿಂಗ್ ಟೀಮ್ ವತಿಯಿಂದ ಊಟದ ವ್ಯಸಸ್ಥೆಯ ಮಾಡುವ ಮಹತ್ತರ ಕಾರ್ಯಕ್ಕೆ ಕೈ ಹಾಕಿದ್ದರು. ಈ ನಿಟ್ಟಿನಲ್ಲಿ ಕಳೆದ 15 ದಿನಗಳಿಂದ ಸಿರವಾರ ತಾಲುಕಿನಲ್ಲಿ “ಲಾಕ್ ಡೌನ್” ಕಾರ್ಯದ ವೃತ್ತಿ ನಿರತರಾದ ಅಧಿಕಾರಿಗಳಿಗೆ ಮತ್ತು ನಿರ್ಗತಿಕರಿಗೆ ಊಟ ನೀಡುವ ಮೂಲಕ ಮಾನವಿಯತೆ ಮೇರೆದಿದ್ದಾರೆ.

Sirwar

ಈ ಕಾರ್ಯಕ್ಕೆ ತಾಲೂಕಿನ ವಿವಿಧ ಸಂಘನಕಾರರು ಊರಿನ ಗಣ್ಯರು ಕೈ ಜೊಡಿಸುವ ಮೂಲಕ ಉತ್ತೇಜನ ನೀಡಿದ್ದಾರೆ. ಅದೇ ರೀತಿ ಇಂದಿನ ದಿನದ ಊಟದ ವ್ಯವಸ್ಥೆಯ ವಿತರಣೆಯನ್ನು ತಾಲೂಕಿನ ಹೆಸರಾಂತ ವೈದ್ಯರು, ಸಾಮಾಜಿಕ ಕಳಕಳಿ ಹೊಂದಿದ, ಗ್ರಾಮಿಣ ಭಾಗದ “ಕೇರ್ ಆ್ಯಂಡ್ ಕ್ಯೂರ್” ಆಸ್ಪತ್ರೇಯ ಪ್ರತಿಭಾನ್ವಿತ ವೈದ್ಯರಾದ ಶ್ರೀ ಡಾ.ಅಜ್ಮಿರ್ ಪಾಷ ಇವರು ತಾಲುಕಿನ ವಿವಿಧ ಇಲಾಖೆಯಲ್ಲಿ ಕಾರ್ಯನಿರತರಾದ ಅಧಿಕಾರಿಗಳಿಗೆ ಊಟವನ್ನು ವಿತರಣೆ ಮಾಡುವ ಮೂಲಕ ಇಂತಹ ಕಾರ್ಯ ಮಾಡುತ್ತೀರುವ ಗುಡ್ ಮಾರ್ನಿಂಗ್ ಟೀಮ್ ನ ದೇವರಾಜ್ ಗೌಡ ಇವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು ಈ ಸಂದರ್ಭದಲ್ಲಿ ಆಸ್ಪತ್ರೇಯ ಸಿಬ್ಬಂದಿಗಳು ಭಾಗಿಯಾಗಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.