ರಾಯಚೂರಿನ ಆಪ್ಪು ಅಭಿಮಾನಿ ಮಾಡಿದ ಕೆಲಸಕ್ಕೆ "ಪವರ್ ಸ್ಟಾರ್ ಫುಲ್ ಫಿದಾ"ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪುನೀತ್.
ರಾಯಚೂರಿನ ಆಪ್ಪು ಅಭಿಮಾನಿ ಮಾಡಿದ ಕೆಲಸಕ್ಕೆ "ಪವರ್ ಸ್ಟಾರ್ ಫುಲ್ ಫಿದಾ"ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪುನೀತ್.
ರಾಯಚೂರು:ಕೊರೋನಾದ ಲಾಕ್ಡೌನ್ ಪ್ರಾರಂಭದ ದಿನಗಳಿಂದ "ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕ ರಾಯಚೂರು" ಮತ್ತು "ಅಪ್ಪು ಯೂತ್ ಬ್ರಿಗೇಡ್"ಜಿಲ್ಲಾ ಘಟಕ ರಾಯಚೂರು ವತಿಯಿಂದ ಕೊರೋನಾದ ಲಾಕ್ ಡೌನ್ ಸಂದರ್ಭವಾಗಿ 107 ದಿನಗಳಿಂದ ನಿರ್ಗತಿಕರಿಗೆ,ನಿರಾಶ್ರಿತರಿಗೆ,ಬಡವರಿಗೆ , ಬೀದಿ ಬದಲಿ ಇರುವವರಿಗೆ ಊಟವನ್ನು ವಿತರಣೆ ಮಾಡುತ್ತಾ ಬಂದಿರುವ ಈ ಯುವಕರ ತಂಡ, ರಾಯಚೂರಿನಲ್ಲಿ ಮಾನವೀಯತೆ ಮೇರೆದಿದ್ದಾರೆ.
ಇವರ ಈ ಕೆಲಸವನ್ನು ಮೆಚ್ಚಿ ಕನ್ನಡ ಚಲನಚಿತ್ರರಂಗದ ಖ್ಯಾತ ನಟ "ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರೆಮಾಡಿ ಸಾದಿಕ್ನ್ ಖಾನ್ ಅವರಿಗೆ ಮತ್ತು ಅವರ ಇಡೀ ತಂಡದವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ . ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಸಂಘಟನೆ ಹೈದರಾಬಾದ್-ಕರ್ನಾಟಕ ಅಧ್ಯಕ್ಷರು ಮತ್ತು ರಾಯಚೂರು ಜಿಲ್ಲಾಧ್ಯಕ್ಷರು ಹಾಗೂ ಅಪ್ಪು ಯೂತ್ ಬ್ರಿಗೇಡ್ ಹೈದರಬಾದ್ ಕರ್ನಾಟಕ ಅಧ್ಯಕ್ಷರು "ಸಾದಿಕ್ ಖಾನ್"ಇವರು ಪುನೀತ್ ರಾಜಕುಮಾರ್ ಅವರ ಜೊತೆಗೆ ಮಾತನಾಡಿ ತಮ್ಮ ಈ ಕೆಲಸದ ಬಗ್ಗೆ ಅನುಭವವನ್ನು ಹಂಚಿಕೊಂಡು,ಜೊತೆಗೆ ಅವರ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು, ಮತ್ತು ಸಾದಿಕ್ ಖಾನ್ ಅವರು ಪುನೀತ್ ರಾಜಕುಮಾರ್ ಅವರಿಗೆ ರಾಯಚೂರು ನಗರಕ್ಕೆ ಬರಬೇಕು ಅಂತ ಮನವಿ ಮಾಡಿದರು.
Recent comments