ಶಿವರಾಜಕುಮಾರ್ ಅವರ ಭೇಟಿ ಮಾಡಿದ ಸಾಧಿಕ್ ಖಾನ್.
ಶಿವರಾಜಕುಮಾರ್ ಅವರ ಭೇಟಿ ಮಾಡಿದ ಸಾಧಿಕ್ ಖಾನ್.
ರಾಯಚೂರು : ನಿನ್ನೆ ಬೆಂಗಳೂರುರಿನಲ್ಲಿ ನಟ ಶಿವರಾಜಕುಮಾರ್ ಅವರ ನಿವಾಸದಲ್ಲಿ ರಾಯಚೂರು ಸಾದಿಕ್ ಖಾನ್ ಅವರು ಭೇಟಿ ಮಾಡಿದರು,ಇದೇ ವೇಳೆ ಕಳೆದ ಲಾಕ್ ದಿನಗಳ ಸಂಧರ್ಭದಿಂದಲೂ ನಿರ್ಗತಿಕರಿಗೆ ಪ್ರತಿದಿನ ಊಟ ನೀಡುತ್ತಾ ಬಂದಿರುವ ಇವರು,ಪವರ್ ಸ್ಟಾರ್ ಅಪ್ಪು ಅವರಿಂದಲೂ ಪ್ರಶಂಸನೀಯ ಪಡೆದ್ದಿದ್ದರು ಅಲ್ಲಿಂದಲೂ ಹಾಗೆ ಈ ಕಾಯಕವನ್ನು ಮುನ್ನಡೆಸುತ್ತಿರುವ ಇವರು ನಿನ್ನೆ ಶಿವಣ್ಣನ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ,
ಶಿವರಾಜ್ ಕುಮಾರ್ ಅವರು ಸಾದಿಕ್ ಖಾನ್ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಮತ್ತು ಅಪ್ಪು ಯೂಥ್ ಬ್ರಿಗೇಡ್ ಜಿಲ್ಲಾ ಘಟಕ ರಾಯಚೂರು ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಮಾಡಿರುವಂತಹ ಅನ್ನದಾನ ಕಾರ್ಯಕ್ರಮ ತಿಂಗಳಿಗೊಮ್ಮೆ ಮಾಡುವಂತಹ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಈ ಭಾಗದಲ್ಲಿ ಮಾಡುತ್ತಿರುವಂತಹ ಸೇವೆಯನ್ನು ಗುರುತಿಸಿ ಅಭಿನಂದನೆಗಳನ್ನು ತಿಳಿಸಿದರು ಮತ್ತು ರಾಯಚೂರಿನಿಂದ ಬಂದ ಎಲ್ಲಾ ಅಭಿಮಾನಿ ಉಪಹಾರ ಆಯೋಜಿಸಿದ್ದರು. ಇದೇ ತರ ನಿಮ್ಮ ಸೇವೆ ನಡೆಯಲಿದೆ ಎಲ್ಲರಿಗೂ ಒಳ್ಳೆಯದಾಗಲೆಂದು ತಿಳಿಸಿದರು ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಮತ್ತು ಅಪ್ಪು ಯೂಥ್ ಬ್ರಿಗೇಡ್ ರಾಯಚೂರು ಜಿಲ್ಲಾಧ್ಯಕ್ಷ ಸಾದಿಕ್ ಖಾನ್,ಮಾರುತಿ, ವಿ. ಜೇ.ನವೀನ್, ಹೊಸೂರು ನಾಸೀರ್, ಉಸ್ಮಾನ್, ಅಮನ್, ಸ್ವಾಮಿ ಮತ್ತಿತರರಿದ್ದರು
Recent comments