ಮನೀಶ್ ಪಾಂಡೆ ಕೈಹಿಡಿಯುವ ಚೆಲುವೆ ಇವಳೇ ನೋಡಿ.
ಮನೀಶ್ ಪಾಂಡೆ ಕೈಹಿಡಿಯುವ ಚೆಲುವೆ ಇವಳೇ ನೋಡಿ.
ಕರ್ನಾಟಕ ತಂಡವನ್ನ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಚಾಂಪಿಯನ್ ಮಾಡಿದ ಕೀರ್ತಿ ಕರ್ನಾಟಕದ ನಾಯಕ ಮನೀಶ್ ಪಾಂಡೆಗೆ ಸಲ್ಲಬೇಕು.. ನಿನ್ನೆ ತಮಿಳು ನಾಡು ವಿರುದ್ಧದ ಫೈನಲ್ ಪಂದ್ಯದಲ್ಲಿ ರೋಚಕ 1 ರನ್ಗಳಿಂದ ಜಯ ಗಳಿಸಿದ ಕರ್ನಾಟಕ ವಿಜಯೋತ್ಸವವನ್ನ ಆಚರಿಸಿತ್ತು..
ಸೂರತ್ ಮೈದಾನದಲ್ಲಿ ಕನ್ನಡ ಧ್ವಜವನ್ನ ಹಾರಿಸಿದ್ದ ಮನೀಶ್ ಹುಡುಗ್ರು, ಎಲ್ಲೇ ಇದ್ರೂ ಕನ್ನಡಿಗರದ್ದೇ ಹವಾ ಎಂಬ ಸೂಚನೆ ನೀಡಿದ್ರು. ನಿನ್ನೆ ಕರ್ನಾಟಕ ಚಾಂಪಿಯನ್ ಮಾಡಿದ ಸಾಹಸಿ ಪರಾಕ್ರಮಿ ನಾಯಕ ಮನೀಶ್ ಪಾಂಡೆಗಿಂದು ಮದುವೆ ಸಂಭ್ರಮ.. ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಆಶ್ರಿತಾ ಶೆಟ್ಟಿಯನ್ನ ಕೈಹಿಡಿಯುತ್ತಿರುವ ಮನೀಶ್ ಪಾಂಡೆ ಒಂಟಿ ಲೈಫ್ಗೆ ಬೈ ಬೈ ಹೇಳ್ತಿದ್ದಾರೆ..
ನಿನ್ನೆಯ ರಣಕದಲ್ಲಿ ಗೆದ್ದು ಸಂಭ್ರಮಿಸಿದ ಕ್ಷಣದ ಖುಷಿ ಒಂದೆಡೆಯಾದ್ರೆ, ಮತ್ತೊಂದೆಡೆ ಮದುವೆ ಸಂಭ್ರಮದ ಸಡಗರ ಪಾಂಡೆ ಖುಷಿಯನ್ನ ದುಪ್ಪಟ್ಟು ಮಾಡಿದೆ.. ಮುಂಬೈನಲ್ಲಿ ನಡೆಯುತ್ತಿರುವ ಮನೀಶ್ ಪಾಂಡೆಗೆ ಮದುವೆಗೆ ಹಲವು ಸ್ಟಾರ್ ಕ್ರಿಕೆಟಿಗರು ಮತ್ತು ನಟ ನಟಿಯರು ಸಾಕ್ಷಿಯಾಗಲಿದ್ದಾರೆ..
Recent comments