58ಲಕ್ಷ ರೂಗಳ ವೆಚ್ಚದ ಶಾಲೆ ಕಟ್ಟಡ ಕಾಮಗಾರಿಗೆ ಶಂಕು ಸ್ಥಾಪನೆ .
58ಲಕ್ಷರೂಗಳ ವೆಚ್ಚದ ಶಾಲೆ ಕಟ್ಟಡ ಕಾಮಗಾರಿಗೆ ಶಂಕು ಸ್ಥಾಪನೆ .
ಸಿರವಾರ:ಬಹುದಿನಗಳ ಬೇಡಿಕೆಯಯಾಗಿದ್ದ, ಶಾಲೆ ಕಟ್ಟಡ ಕಾಮಗಾರಿಗೆ ಸಿರವಾರ ಪಟ್ಟಣದಲ್ಲಿ 2019-20 ಸಾಲಿನ ನಬಾರ್ಡ್ ಯೋಜನೆ ಅಡಿಯಲ್ಲಿ ಸುಮಾರು 58 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಾಲೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿಸುವುದರ ಮೂಲಕ ಮಾನವಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಮಾನವಿ ಇವರು ಮತ್ತೊಂದು ಅಭಿರುದ್ದಿಯ ಕಾರ್ಯಕ್ಕೆ ಕಾರಣ ರಾಗಿದ್ದಾರೆ .
ಇನ್ನೂ ಈ ಕಾರ್ಯಕ್ರಮದ ಉದ್ಘಾಟನೆಯ ನಂತರ ಮಾತನಾಡಿ ,ಈ ಒಂದು ಶಾಲೆ ಕಟ್ಟಡ ಕಾಮಗಾರಿ ಯಿಂದ ನೂತನ ತಾಲೂಕಿನ ಗ್ರಾಮೀಣ ಭಾಗದಿಂದ ಬರುವವಂತಹ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಶಾಸಕರು ಹೇಳಿದರು.
ಇದೆ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಮುಂಖಡರಾದ ಶ್ರೀ ರಾಜಾ ರಾಮಚಂದ್ರ ನಾಯಕ,ತಾಲ್ಲೂಕು ಜೆಡಿಎಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೇಲ ಬಲ್ಲಟಿಗಿ,ಹಿರಿಯ ಮುಂಖಡರಾದ ಶ್ರೀ ಜಿ ಲೋಕರೆಡ್ಡಿ ಸಿರವಾರ,ಖಲೀಲ ಖುರೀಷ,ಭಾಷ ಸಾಬ್,ಗೋಪಾಲ ನಾಯಕ ಹರವಿ,ಎಮ್ ಡಿ ಇಸ್ಮಾಯಿಲ್, ಎಸ್ ಯಕೋಬ,ಮೌಲ ಸಾಬ್, ಚಂದ್ರಶೇಖರ ಸ್ವಾಮಿ,ಈಶಪ್ಪ ಹೂಗಾರ್,ಇಮಾಮ, ಪ್ರಕಾಶಪ್ಪ,ದಾನಪ್ಪ,ನಾಗರಾಜ ಗೌಡ,ವಿಜಯಲಕ್ಷ್ಮಿ, ಸೂರಿ ಅಮರೇಶ ನಾಯಕ,ಶಾಂತಪ್ಪ ಪೀತಗಲ್,ಶರಣಬಸವ,ಅದೇಪ್ಪ ಸಾಹೂಕಾರ,ಉಪಸ್ಥಿತಿರಿದ್ದರು
Recent comments