ಸಂಕಷ್ಟದಲ್ಲಿದ್ದ ಅತಿಥಿ ಉಪನ್ಯಾಸಕನಿಗೆ ಧನಸಹಾಯ ಮಾಡಿದ ಶ್ರೀ ಜಿ ಲೋಕರೆಡ್ಡಿ.
ಸಂಕಷ್ಟದಲ್ಲಿದ್ದ ಅತಿಥಿ ಉಪನ್ಯಾಸಕನಿಗೆ ಧನಸಹಾಯ ಮಾಡಿದ ಶ್ರೀ ಜಿ ಲೋಕರೆಡ್ಡಿ.
ಆಲ್ಕೋಡ್: ಕೇಲವು ದಿನಗಳಿಂದಷ್ಟೇ ಅತಿಥಿ ಉಪನ್ಯಾಸಕರಾದ ಡಾ.ಅಮರೇಶ್ ಆಲ್ಕೋಡ್ ಇವರು ತಮ್ಮ ಕಿಡ್ನಿ ವೈಪಲ್ಯ ಮತ್ತು ಪತ್ನಿಯನ್ನು ಕೆಳೆದುಕೊಂಡು ಇತ್ತ ಕೋವಿಡ್ -19ಸಮಸ್ಯೆಯಿಂದ ಯಾವ ಕಾಲೇಜುಗಳು ಪ್ರಾರಂಭವಾಗದ ಕಾರಣ ಯಾವುದೇ ಕೆಲಸಮಾಡದ ಸ್ಥಿತಿಯಲ್ಲಿಇದ್ದು ಉಳ್ಳವರು ಆರ್ಥಿಕವಾಗಿ ಸಹಾಯ ಮಾಡಲು ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಅವರು ಆರ್ಥಿಕವಾಗಿ ಅನುಭವಿಸುತ್ತಿದ್ದ ಕಷ್ಟವನ್ನು ಜನರೊಂದಿಗೆ ವಿಡಿಯೋ ಮೂಲಕ ಅಂಚಿಕೊಂಡಿದ್ದರು ಇದನ್ನು ಗಮನಿಸಿದ ಸಿರವಾರ ತಾಲೂಕಿನ ಜಿ ಲೋಕರಡ್ಡಿ ಇವರು ಇವರಿಗೆ 20000rs ರೂಪಾಯಿಗಳು ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೇರೆದಿದ್ದಾರೆ.
ಇವರ ಕಷ್ಟಕ್ಕೆ ಸ್ಪಂದಿಸಿದ ಇವರಿಗೆ ತಮ್ಮ ಮಾತುಗಳ ಮೂಲಕ ಅಭಿನಂದನೆಸಲ್ಲಿಸಿದ್ದಾರೆ .
ಸಮಸ್ಯೆಗೆ ಸ್ಪಂದಿಸಿ ಸಾಂತ್ವನ ಹೇಳಿದ ಸಹೃದಯಿ: ಲೋಕರಡ್ಡಿ ಸಿರವಾರ ತಾಲೂಕಿನ ರೈತಪರ ನಾಯಕ, ಬಡವರ ಬಂಧು, ಅಭಿವೃದ್ಧಿಯ ಹರಿಕಾರ, ಧೀಮಂತ ನಾಯಕ, ಸಮಸ್ಯೆ ಗೆ ಸ್ಪಂದಿಸುವ ಮಾತೃ ಹೃದಯದ ವ್ಯಕ್ತಿತ್ವ ವನ್ನು ರೂಡಿಸಿಕೊಂಡಿರುವ ಜೆಡಿಎಸ್ ನಾಯಕರಾದ ಸನ್ಮಾನ್ಯ ಶ್ರೀ ಲೋಕರಡ್ಡಿ ಯವರು ದಿನಾಂಕ:೨೪-೦೬-೨೦೨೦ರಂದು ಬುಧವಾರ ಕಿಡ್ನಿ ವೈಫಲ್ಯ ಮತ್ತು ನನ್ನ ಪತ್ನಿಯ ಅಕಾಲಿಕ ಮರಣದಿಂದ ಸಂಕಷ್ಟ ದಿಂದ ಬಳಲುತ್ತಿದ್ದ ನನಗೆ ಸಾಂತ್ವನ ಹೇಳಿ, ಆಥಿ೯ಕ ಸಹಾಯ ಮಾಡಿ, "ನಿನಗೆ ಮತ್ತು ನಿನ್ನ ಮಕ್ಕಳ ಭವಿಷ್ಯದ ಲ್ಲಿ ಏನಾದರೂ ಸಹಾಯ ಬೇಕಾದರೆ ಕೇಳಿ" ಎಂದು ಭರವಸೆ ಯ ಮಾತುಗಳನ್ನು ಹೇಳಿದ ಮಾನ್ಯ ರಿಗೆ ಹೃದಯಪೂವ೯ಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರಿಗೆ ಆ ದೇವರು ಆಯುರಾರೋಗ್ಯ ಕರುಣಿಸಿ ನೂರು ಕಾಲ ಬಾಳಲಿ ಎಂದು ಪ್ರಾರ್ಥಿಸು ತ್ತೇನೆ. ಇವರ ಆದಶ೯ ಗುಣಗಳನ್ನು ಕಂಡ ನನಗೆ ಏನೋ ಮನಸ್ಸಿಗೆ ಸಮಾಧಾನ ತಂದಿದೆ ಎಂದು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ. ಅವರು ನಮ್ಮ ಕ್ಷೇತ್ರದವರು ಅಲ್ಲದಿದ್ದರೂ ನಮ್ಮ ಮನೆಗೆ ಬಂದು ಸಾಂತ್ವನ ಹೇಳಿ, ಕಷ್ಟದ ಲ್ಲಿ ಇದ್ದವರಿಗೆ ಸಹಾಯ ಮಾಡುವ ಇವರ ಗುಣ ಮಾದರಿಯಾಗಿದೆ. ನಿಮ್ಮ ಈ ಗುಣಕ್ಕೆ ನನ್ನ ಕೃತಜ್ಞತೆ ಗಳು. ಡಾ. ಅಮರೇಶ ಆಲ್ಕೋಡ.
Recent comments