ಪಬ್ಲಿಕ್ ಟಿವಿ ಪತ್ರಕರ್ತ ಹನುಮಂತು ಅವರ ಪತ್ನಿಗೆ ಎಚ್ಡಿಕೆ ಚೆಕ್ ವಿತರಣೆ.
ಪಬ್ಲಿಕ್ ಟಿವಿ ಪತ್ರಕರ್ತ ಹನುಮಂತು ಅವರ ಪತ್ನಿಗೆ ಎಚ್ಡಿಕೆ ಚೆಕ್ ವಿತರಣೆ.
ರಾಮನಗರ : ನಿನ್ನೆ ಮಾಧ್ಯಮ ವರದಿಗೆ ತೆರಳಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಮಂಗಳವಾರ ಸಾವನ್ನಪ್ಪಿದ ರಾಮನಗರ ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರರಾಗಿದ್ದ ಹನುಮಂತು ಅವರ ಆತ್ಮಕ್ಕೆ ಶಾಂತಿ ಕೋರಿ ಪರಿಹಾರ ನೀಡುವುದಾಗಿ ಹೇಳಿದ್ದ ಮಾಜಿ ಮುಖ್ಯ ಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರ ಸ್ವಾಮಿಯವರು ಇಂದು ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಎಚ್.ಡಿ.ಕೆ ಅವರು ಸಾಂತ್ವನ ಹೇಳಿದರು. ಮೃತ ಪತ್ರಕರ್ತ ಹನುಮಂತು ಅವರ ಪತ್ನಿ ಶಶಿಕಲಾ ಅವರಿಗೆ ಐದು ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು. ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ ಹೋಬಳಿಯ ಹನುಮಂತು ಸ್ವಗ್ರಾಮ ಪಡುವಣಗೆರೆಗೆ ಭೇಟಿ ನೀಡಿ ಅವರ ಕುಟುಂಬದ ಸದಸ್ಯರು ಹಾಗು ಹನುಮಂತು ಪತ್ನಿಗೆ ಧೈರ್ಯ ತುಂಬಿದರು.ಇನ್ನೂ ಮಾಧ್ಯಮಗಳ ಜೊತೆ ಮಾತನಾಡಿದ ಹನುಮಂತು ಅವರ ಸಹೋದರ ನಮಗೆ ಹೆಚ್ ಡಿ ಕೆ ಯವರು ಧೈರ್ಯ ಹೇಳಿದ್ದಾರೆ ಎಂದು ಹೇಳಿದರು .
Recent comments