ಕೊರೋನಾ ವಾರಿಯರ್ಸ್ ಸೇವೆ ಅಪಾರ ನಿಮ್ಮ ಜೊತೆ ನಾನು ಇರುತ್ತನೇ.ನಿಖಿಲ್ ಕುಮಾರ್ ಸ್ವಾಮಿ.
ಕೊರೋನ ವಾರಿಯರ್ಸ್ ನೆರವಿಗೆ ಧಾವಿಸಿದ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ.
ರಾಮನಗರ :ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ. ರಾಮನಗರ ವಿಧಾನಸಭಾ ಕ್ಷೇತ್ರದ ಕೊರೋನಾ ವಾರಿಯರ್ಸ್ಗೆ ಗೌರವಧನ, ಆಹಾರ ಕಿಟ್, ಸ್ಟೀಂ ಮಿಷನ್ ವಿತರಣೆಮಾಡಿದರು.ಇಂತಹ ಕೊರೋನಾ ಸಂಧರ್ಭದ ಕಠಿಣ ಸಮಯದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೊರೋನಾ ವಾರಿಯರ್ಸ್ಆಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ಸ್ಟಾಫ್ ನರ್ಸ್ ಸೇರಿದಂತೆ ಎಲ್ಲಾ ಕೊರೋನಾ ವಾರಿಯರ್ಸ್ಗೆ ನೆರವಿನ ಹಸ್ತನೀಡಿದರು.
ರಾಮನಗರ ಜ್ಯೂನಿಯರ್ ಕಾಲೇಜು ಮೈದಾನದ ಹತ್ತಿರ ನಡೆಯುತ್ತಿರೋ ಕಾರ್ಯಕ್ರಮದ ಉದ್ದೇಶೇಶಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿಅವರು ಕೊರೋನಾದಿಂದ ರಾಜ್ಯದಲ್ಲಿ ಬಹಳಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದ್ರಲ್ಲೂ ಹೆಚ್ಚು 30 ರಿಂದ 40 ವರ್ಷದ ಯುವಕರನ್ನು ಕಳೆದುಕೊಂಡಿದ್ದೇವೆ.
ಪ್ರತಿಯೊಬ್ಬ ನಾಗರಿಕನಿಗೂ ವ್ಯಾಕ್ಸಿನೇಷನ್ ಹಾಕುವ ಕೆಲಸ ಆಗಬೇಕಿದೆ.. ನಮ್ಮ ಶಾಸಕರ ಸಲಹೆಯಂತೆ ಮುಂದಿನ ವಾರದಿಂದ ನಮ್ಮ ತಾಲ್ಲೂಕಿನಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭ ಮಾಡುತ್ತೇವೆ. ಇಡೀ ರಾಮನಗರ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಮಾಡುತ್ತೇವೆ. ಜಿಲ್ಲಾ ವೈದ್ಯಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳ ಜೊತೆ ಈಗಾಗಲೇ ಮಾತನಾಡಿದ್ದೇವೆ.
ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.
ನಾವಿನ್ನು ಕೊರೋನಾದಿಂದ ಮುಕ್ತರಾಗಿಲ್ಲ, ಮೂರನೇ ಅಲೆ ಅತೀ ಶೀಘ್ರದಲ್ಲೇ ಪ್ರಾರಂಭ ಆಗುವ ಸಾಧ್ಯತೆ ಇದೆ.. ನಿಮ್ಮ ಪ್ರಾಣ ಪಣಕ್ಕಿಟ್ಟು ಇಂದು ನೀವು ಹೋರಾಟ ಮಾಡಿತ್ತಿದ್ದೀರಿ. ಮುಂದಿನ ದಿನಗಳಲ್ಲೂ ಇದನ್ನು ಮುಂದುವರೆಸಿ, ನಿಮ್ಮ ಪರ ನಾವಿರುತ್ತೇವೆ,ಎಂದು ನಿಖಿಲ್ ಕುಮಾರ್ ಸ್ವಾಮಿಯವರು ಕೊರೋನಾ ವಾರಿಯರ್ಸ್ ಗೆ ಮನವಿ ಮಾಡಿದರು.
Recent comments