Skip to main content
ಹೆಚ್ ಡಿ ಕೆ ಯವರಿಂದ 30ಸಾವಿರ ಬಡ ಕುಟುಂಬಗಳಿಗೆ ಉಚಿತ ಆಹಾರ ವಿತರಣೆ .

ಹೆಚ್ ಡಿ ಕೆ ಯವರಿಂದ 30ಸಾವಿರ ಬಡ ಕುಟುಂಬಗಳಿಗೆ ಉಚಿತ ಆಹಾರ ವಿತರಣೆ .

ಹೆಚ್ ಡಿ ಕೆ ಯವರಿಂದ 30ಸಾವಿರ ಬಡ ಕುಟುಂಬಗಳಿಗೆ ಉಚಿತ ಆಹಾರ ವಿತರಣೆ .

Hdk

ರಾಮನಗರ : ಕೊರೋನಾ ಸಂಕಷ್ಟದಲ್ಲಿರುವ ಬಡವರ್ಗದ ಜನರಿಗೆ ದಿನಸಿ ಆಹಾರ ಪದಾರ್ಥಗಳನ್ನ ಮನೆಮನೆಗೆ ತಲುಪಿಸುವ ಯೋಜನೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಚಾಲನೆ ನೀಡಿದ್ದಾರೆ‌. ಈಗಾಗಲೇ ಬೆಳಿಗ್ಗೆ ಮತ್ತು ಸಂಜೆ ಉಪಹಾರವನ್ನ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತು ಶ್ರೀಮತಿ ಅನಿತಾ ಕುಮಾರಸ್ವಾಮಿಯವರು ಪ್ರತಿನಿತ್ಯ ರಾಮನಗರ ಮತ್ತು ಚನ್ನಪಟ್ಡಣ ಕ್ಷೇತ್ರಗಳಲ್ಲಿ ಸುಮಾರು 10 ಸಾವಿರ ಬಡವರ್ಗದ ಮಂದಿಗೆ ಬೆಳಿಗ್ಗೆ ಸಂಜೆ ಉಪಹಾರವನ್ನ ಉಚಿತವಾಗಿ ನೀಡುತ್ತಿದ್ದಾರೆ.

Hdk

*ಅನ್ನಂ ಪರಬ್ರಹ್ಮಂ*

ಎಂಬ ಮಾತಿನಂತೆ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತು ಅನಿತಾ ಕುಮಾರಸ್ವಾಮಿಯವರು ರಾಮನಗರದ ಕ್ಷೇತ್ರದ 30 ಸಾವಿರ ಬಡ ಕುಟುಂಬಗಳಿಗೆ ಮತ್ತು ಚನ್ನಪಟ್ಡಣ ಕ್ಷೇತ್ರದ 30 ಸಾವಿರ ಬಡ ಕುಟುಂಬಗಳಿಗೆ ದಿನಸಿ ಆಹಾರ ಪದಾರ್ಥಗಳನ್ನ ನೀಡುವ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ .

Hdk

ಈಗಾಗಲೇ ಜೆಡಿಎಸ್ ಸ್ವಯಂಸೇವಕರು ದಿನಸಿ ಆಹಾರ ಪದಾರ್ಥಗಳನ್ನ ಪ್ಯಾಕಿಂಗ್ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರು ಕಆಹಾರ ದಿನಸಿ ಪ್ಯಾಕಿಂಗ್ ಮಾಡುತ್ತಿರುವ ರಾಮನಗರದ ಮಂಜುನಾಥ ಕನ್ವೆನ್ಶನ್ ಹಾಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಿನಸಿ ಆಹಾರ ಪದಾರ್ಥಗಳ‌‌ ಕಿಟ್ ಗಳನ್ನ ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಡ ಜನರಿಗೆ ಮತ್ತು ನಗರ ವ್ಯಾಪ್ತಿಯ ಬಡವರ್ಗದ ಜನರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.